ಗೋಕಾಕ:ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನ ನಿಮಿತ್ಯ ಬಿಜೆಪಿ ಹಮ್ಮಿಕೊಂಡ ಸೇವೆ ಮತ್ತು ಸಮರ್ಪಣ ಕಾರ್ಯಕ್ರಮದ ಸಮಾರೋಪ ಸಮಾರಂಭ
ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನ ನಿಮಿತ್ಯ ಬಿಜೆಪಿ ಹಮ್ಮಿಕೊಂಡ ಸೇವೆ ಮತ್ತು ಸಮರ್ಪಣ ಕಾರ್ಯಕ್ರಮದ ಸಮಾರೋಪ ಸಮಾರಂಭ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 7 :
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 20 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ತಮ್ಮ ಅಧಿಕಾರವಧಿಯಲ್ಲಿ ಸರ್ವಜನಾಂಗದವರ ಏಳ್ಗೆಗಾಗಿ ಶ್ರಮಿಸುತ್ತ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ ಹೇಳಿದರು.
ಅವರು, ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನ ನಿಮಿತ್ಯ ಬಿಜೆಪಿ ಹಮ್ಮಿಕೊಂಡ ಸೇವೆ ಮತ್ತು ಸಮರ್ಪಣ ಕಾರ್ಯಕ್ರಮದ ಸಮಾರೋಪ ಸಮಾರಂಭದ ಹಿನ್ನಲೆ ಗೋಕಾಕ ಮತಕ್ಷೇತ್ರದಾಧ್ಯಂತ ಬೂತ್ ಮಟ್ಟದಲ್ಲಿ ಪ್ರಧಾನಮಂತ್ರಿಗಳಿಗೆ ಶುಭಾಶಯ, ಅಭಿನಂದನಾ ಪತ್ರ ಬರೆಯುವ ಪೆÇೀಸ್ಟ್ ಕಾರ್ಡ್ ಮಹಾ ಅಭಿಯಾನದಲ್ಲಿ ಶುಭಾಶಯ ಪತ್ರ ಅಂಚೆ ಪೆಟ್ಟಿಗೆಗೆ ಹಾಕಿ ಮಾತನಾಡಿದರು.
ತಮ್ಮ 20 ವರ್ಷದ ಅಧಿಕಾರಾವಧಿಯಲ್ಲಿ ಶೋಷಿತರ, ಹಿಂದುಳಿದ ವರ್ಗಗಳ, ಬಡವರ ಹಾಗೂ ಸರ್ವ ವರ್ಗದ ಪರ ಯೋಜನೆಗಳು-ಅಭಿವೃದ್ಧಿ ಪರವಾದ ಆಡಳಿತ, ಭ್ರμÁ್ಟಚಾರರಹಿತ ಸರಕಾರ ರಚಿಸುವ ಮೂಲಕ ಅತ್ಯುತ್ತಮ ಆಡಳಿತ ನೀಡಿದ್ದಲ್ಲದೇ, ದಾಖಲೆಯ ಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡುತ್ತಿದ್ದಾರೆ ಎಂದರು.
ಒಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಖಡಕಭಾಂವಿ ಅವರು ಮಾತನಾಡಿ, ಭಾರತವನ್ನು ವಿಶ್ವಗುರುವನ್ನಾಗಿಸುವ ಪ್ರಧಾನಿ ನರೇಂದ್ರ ಮೋದಿಯವರ ಮಹೋನ್ನತ ಸಂಕಲ್ಪ ಹೊಂದಿದ್ದು, ಅವರಿಗೆ ಇನಷ್ಟು ಸೌಭಾಗ್ಯ, ಆಯುರ ಆರೋಗ್ಯವನ್ನು ತಾಯಿ ಭಾರತಾಂಬೆ ಕರುಣಿಸಲಿ ಎಂದು ಅವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಮಲ್ಲಿಕಜಾನ ತಲವಾರ, ಕಾರ್ಯದರ್ಶಿಗಳಾದ ಅಬ್ಬಾಸ ದೇಸಾಯಿ, ಮ್ಯಾಥ್ಯೂ ವರ್ಗಿಸ್, ರಾಯಪ್ಪ ಗುದಗಣ್ಣವರ ಶಿವಾಜಿ ಸುಭಂಜಿ, ಶಶಿಕಾಂತ ಕುರಬೇಟ, ಶ್ರೀಶೈಲ್ ಕುಂಬಾರ, ಮಹಾಂತೇಶ ಕುಂಬಾರ, ಮಹಾದೇವ ಸಂಕಪಾಳ,ಸಂತೋಷ ಖಂಡ್ರಿ , ಶಶಿ ಕನ್ನಪ್ಪನವರ, ಸಾಯಿನಾಥ ಟಿಪ್ಪುಕುಡೆ, ಅಮಿತ್ ಮಾಳಿ, ರಮೇಶ್ ನಾಯ್ಕ, ಸುರೇಶ ಬೀರನಗಡ್ಡಿ, ಲಕ್ಷ್ಮಣ ಕಿಲಾರಿ, ಮೊಸೀನ ಬುಡನ್ನವರ, ಶಬ್ಬೀರ ಮುಲ್ಲಾ, ಸದ್ದಾಂ ಡಾಂಗೆ, ಯಾಸೀನ ಚಾಂದಖಾನ, ಹೈದರ ಮುಲ್ಲಾ, ಇಮ್ರಾನ್ ಖಲೀಫ್, ಅಜೀಜ್ ಮೋಕಾಶಿ, ಇಜಾಜ್ ಖಲೀಫ್, ಆನಂದ ಕಪ್ಪರಟ್ಟಿ, ಲಕ್ಷ್ಮಣ ಕಪರಟ್ಟಿ ಹಾಗೂ ವಿವಿಧ ಮೋರ್ಚಾ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.