ಘಟಪ್ರಭಾ:ದೇವರ ಆರಾಧನೆಯಿಂದ ಮುಕ್ತಿ ಪ್ರಾಪ್ತಿ : ನಾರಾಯಣ ಶರಣರು
ದೇವರ ಆರಾಧನೆಯಿಂದ ಮುಕ್ತಿ ಪ್ರಾಪ್ತಿ : ನಾರಾಯಣ ಶರಣರು
ಘಟಪ್ರಭಾ ಸೆ 22 : ನವರಾತ್ರಿ ನಿಮಿತ್ಯ ದೇವಿಯ ಆರಾಧನೆ ಮಾಡುವ ಮೂಲಕ ಜೀವನದಲ್ಲಿ ಮುಕ್ತಿ ದೊರೆಯುತ್ತಿದೆ ಎಂದು ವಡೇರಹಟ್ಟಿಯ ಅಂಬಾ ದರ್ಶನ ಪೀಠದ ನಾರಾಯಣ ಶರಣರು ಹೇಳಿದರು.
ಅವರು ಗುರುವಾರದಂದು ಸಂಜೆ ಸಮೀಪದ ಶಿಂದಿಕುರಬೇಟ ಗ್ರಾಮದ ಜಗನ್ಮಾತೆ ಶ್ರೀ ಅಂಬಾಭವಾನಿ ದೇವಿಯ ನೂತನ ದೇವಸ್ಥಾನ ಉದ್ಘಾಟನೆ,ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದ ನಿಮಿತ್ಯ ಜರುಗಿದ ನವರಾತ್ರಿ ಉತ್ಸವ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ನವರಾತ್ರಿ ಹಬ್ಬದಲ್ಲಿ ದೇವಿಯು ನವ ಅವತಾರಗಳಲ್ಲಿ ಅಲಂಕಾರಗೊಳ್ಳುತ್ತಾಳೆ. ದೇವಿಯನ್ನು ಪೂಜಿಸುವ ಮೂಲಕ ಮಾನವನ ಎಲ್ಲ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ. ಜಗತ್ತಿನ ಎಲ್ಲ ಜೀವರಾಶಿಗಳಿಗೆ ಸುಖಮಯದಿಂದ ಬಾಳಲಿ ಎಂದು ಹಾರೈಸುತ್ತಾಳೆ ಎಂದರು.
ಕಾರ್ಯಕ್ರಮವನ್ನು ಘಟಪ್ರಭಾದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ರಾಜಯೋಗಿನಿ ಸವಿತಾ ಅಕ್ಕನವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವೇದಮೂರ್ತಿ ಶ್ರೀಶೈಲ ಹಿರೇಮಠ, ಮಹಾಂತೇಶ ತಾಂವಶಿ, ಜ್ಯೋತಿಭಾ ಮಹಾರಾಜರು, ವಿಠ್ಠಲ ದೇವರ ದೇವಋಷಿ ಮುರೆಪ್ಪ ಪೂಜೇರಿ, ದಯಾನಂದ ಬೆಳಗಾವಿ, ಪುಂಡಲೀಕ ಬಡಿಗೇರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸದಾನಂದ ಗಾಯಕವಾಡ ಸ್ವಾಗತಿಸಿದರು. ಸುರೇಶ ಮುರಮಕರ ನಿರೂಪಿಸಿದರು. ಪುರಂದರ ಕೋಳಿ ವಂದಿಸಿದರು.