RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸಿದ ಅಗ್ರಗಣ್ಯ ನಾಯಕರಲ್ಲಿ ಶಿವಾಜಿ ಮಹಾರಾಜರು ಒಬ್ಬರು : ಪಂಡಿತ್ ಒಗಲೆ

ಗೋಕಾಕ:ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸಿದ ಅಗ್ರಗಣ್ಯ ನಾಯಕರಲ್ಲಿ ಶಿವಾಜಿ ಮಹಾರಾಜರು ಒಬ್ಬರು : ಪಂಡಿತ್ ಒಗಲೆ 

ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸಿದ ಅಗ್ರಗಣ್ಯ ನಾಯಕರಲ್ಲಿ ಶಿವಾಜಿ ಮಹಾರಾಜರು ಒಬ್ಬರು : ಪಂಡಿತ್ ಒಗಲೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 19 :

 
ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸಿದ ಅಗ್ರಗಣ್ಯ ನಾಯಕರಲ್ಲಿ ಶಿವಾಜಿ ಮಹಾರಾಜರು ಒಬ್ಬರಾಗಿದ್ದರು ಎಂದು ಖಾನಾಪುರದ ಪಂಡಿತ್ ಒಗಲೆ ಹೇಳಿದರು.

ಶನಿವಾರದಂದು ನಗರದ ರಾಯಣ್ಣ ವೃತ್ತದಲ್ಲಿ ಸಾರ್ವಜನಿಕ ಶ್ರೀ ಶಿವಾಜಿ ಜಯಂತಿ ಉತ್ಸವ ಸಮಿತಿ ಅವರು ಹಮ್ಮಿಕೊಂಡ 392ನೇ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಜಿಜಾ ಮಾತಾಜಿ ಅವರು ಶಿವಾಜಿ ಮಹಾರಾಜರಿಗೆ ಉತ್ತಮ ಸಂಸ್ಕಾರ ನೀಡಿದ್ದರಿಂದಲೇ ಅವರು ಮಹಾನ ನಾಯಕರಾದರು. ಇಂದು ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರಲ್ಲಿ ದೇಶ ಭಕ್ತಿ ತುಂಬಿ ದೇಶಾಭಿಮಾನಿಗಳನ್ನಾಗಿ ಮಾಡಿರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಪ್ಪಯ್ಯನ ಮಠದ ಶ್ರೀ ರಾಚೋಟಿ ದೇವರು, ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಪೌರಾಯುಕ್ತ ಶಿವಾನಂದ ಹಿರೇಮಠ, ನಗರಸಭೆ ಸದಸ್ಯ ಪ್ರಕಾಶ ಮುರಾರಿ, ಎಸ್.ವ್ಹಿ .ದೇಮಶೆಟ್ಟಿ , ಬಸವರಾಜ ಪಡತರೆ , ಮಲ್ಲೂ ಭಂಗ್ಯಾಗೋಳ, ಶಿವು ಮುತ್ತನಾಳ, ಈರಣ್ಣ ಅಂಬಲಿ, ಸಾಗರ ಕದಂಮ್, ಅಕ್ಷಯ ಗೌಳಿ, ಶಂಕರ ವಾಕೂಡೆ, ಪರಶು ಗೊಂದಳಿ, ರಮೇಶ ಬಿರಡಿ,ಕಿರಣ ಢಮಾಮಗರ, ಬಸವರಾಜ ದೇಶನೂರ ಉಪಸ್ಥಿತರಿದ್ದರು.

Related posts: