RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಶೂನ್ಯ ಸಂಪಾದನ ಮಠದಿಂದ ಅತೀ ಶೀಘ್ರದಲ್ಲೇ ಬಡವರಿಗಾಗಿ ಸುಸಜ್ಜಿತ ಉಚಿತ ಆಸ್ಪತ್ರೆ ನಿರ್ಮಾಣ : ಮುರುಘರಾಜೇಂದ್ರ ಶ್ರೀ ಮಾಹಿತಿ

ಗೋಕಾಕ:ಶೂನ್ಯ ಸಂಪಾದನ ಮಠದಿಂದ ಅತೀ ಶೀಘ್ರದಲ್ಲೇ ಬಡವರಿಗಾಗಿ ಸುಸಜ್ಜಿತ ಉಚಿತ ಆಸ್ಪತ್ರೆ ನಿರ್ಮಾಣ : ಮುರುಘರಾಜೇಂದ್ರ ಶ್ರೀ ಮಾಹಿತಿ 

ಶೂನ್ಯ ಸಂಪಾದನ ಮಠದಿಂದ ಅತೀ ಶೀಘ್ರದಲ್ಲೇ ಬಡವರಿಗಾಗಿ ಸುಸಜ್ಜಿತ ಉಚಿತ ಆಸ್ಪತ್ರೆ ನಿರ್ಮಾಣ : ಮುರುಘರಾಜೇಂದ್ರ ಶ್ರೀ ಮಾಹಿತಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 7 :
ಶೂನ್ಯ ಸಂಪಾದನ ಮಠದಿಂದ ಅತೀ ಶೀಘ್ರದಲ್ಲೇ ಬಡವರಿಗಾಗಿ ಸುಸಜ್ಜಿತ ಉಚಿತ ಆಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ಶೂನ್ಯ ಸಂಪದಾನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ರವಿವಾರದಂದು ಸಾಯಂಕಾಲ ನಗರದ ಚನ್ನಬಸವೇಶ್ವರ ವಿದ್ಯಾ ಪೀಠದ ಆವರಣದಲ್ಲಿ ಶೂನ್ಯ ಸಂಪಾದನ ಮಠದ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡ 17ನೇ ಶರಣ ಸಂಸ್ಕೃತಿ ಉತ್ಸವದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಶ್ರೀ ಮಠದಿಂದ ಶೈಕ್ಷಣಿಕ, ವೈದ್ಯಕೀಯ ಸಾಮಾಜಿಕ ಸೇವೆಯಾಗಬೇಕು ಎಂಬ ಸದುದ್ದೇಶದಿಂದ ಗೋಕಾಕ ನಗರದಲ್ಲಿ ಉಚಿತ ಆಸ್ಪತ್ರೆ ನಿರ್ಮಿಸಿ ಬಡವರ ಸೇವೆ ಮಾಡುವ ಸಂಕಲ್ಪವನ್ನು ಹೊಂದಿದ್ದು ಅತೀ ಶೀಘ್ರದಲ್ಲೇ ಇದರ ಕಾರ್ಯ ಪ್ರಾರಂಭಿಸಲಾಗುವದು. ಇದರ ಜೊತೆಗೆ ವೃದ್ದಾಶ್ರಮ ಸೇರಿದಂತೆ ಇನ್ನೀತರ ಸಾಮಾಜಿಕ ಕಳಕಳಿವುಳ್ಳ ಕಾರ್ಯಗಳನ್ನು ಹಂತ ಹಂತವಾಗಿ ಮಾಡಬೇಕು ಎಂಬ ಸಂಕಲ್ಪ ಹೊಂದಿದ್ದೇನೆ ಎಂದ ಅವರು ಗೋಕಾವಿ ನಾಡಿನ ಸಮಸ್ತ ಸಾರ್ವಜನಿಕರ ಸಹಕಾರದಿಂದ ಶರಣ ಸಂಸ್ಕೃತಿ ಉತ್ಸವ ವಿಜಂಭ್ರಣೆಯಿಂದ ಜರುಗಿದೆ. ಉತ್ಸದಲ್ಲಿ ಮೂಡಿಬಂದ ಶರಣರ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು ಪಾವನ ಗೋಳಿಸಿಕೊಳ್ಳಬೇಕು ಎಂದು ಹೇಳಿದರು.

Related posts: