ಗೋಕಾಕ:ಛದ್ಮವೇಷ ಸ್ಪರ್ಧೆಯಲ್ಲಿ ತನುಶ್ರೀಗೆ ದ್ವಿತೀಯ ಸ್ಥಾನ
ಛದ್ಮವೇಷ ಸ್ಪರ್ಧೆಯಲ್ಲಿ ತನುಶ್ರೀಗೆ ದ್ವಿತೀಯ ಸ್ಥಾನ
ಗೋಕಾಕ ಸೆ 26: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲತ್ಸೋವ ಸಾಂಸ್ಕಂತಿಕ ಸ್ಫರ್ಧೆಯಲ್ಲಿ ಛದ್ಮವೇಷ ಸ್ಪರ್ಧೆಯಲ್ಲಿ ವೀರರಾಣಿ ಒನಕೆ ಓಬವ್ವ ಪಾತ್ರದಲ್ಲಿ ನಗರದ ಎಚ್ಪಿಎಸ್ ಗಾಂಧಿನಗರದ ಎಪಿಎಂಸಿ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ಕುಮಾರಿ ತನುಶ್ರೀ ಭೀಮಪ್ಪ ಸಂಪಗಾಂವಿ ದ್ವಿತೀಯ ಸ್ಥಾನ ಪಡೆದುಕೊಂಡು ತಾಲೂಕಿಗೆ ಮತ್ತು ಶಾಲೆಗೆ ಕೀರ್ತಿ ತಂದು ಕೊಟ್ಟಿದ್ದಾಳೆ. ಈವಿದ್ಯಾರ್ಥಿನಿ ಸಾಧನೆಯನ್ನು ಬಿಇಒ ಜಿ.ಬಿ.ಬಳಗಾರ ಹಾಗೂ ಶಾಲೆಯ ಪ್ರಧಾನ ಗುರುಗಳು,ಶಿಕ್ಷಕ ವೃಂದ ಸೇರಿದಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.