RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಜಾತಿಮತವ ಮರೆತು ಒಂದಾಗಿ ಬಾಳಿ : ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಜಿ

ಗೋಕಾಕ:ಜಾತಿಮತವ ಮರೆತು ಒಂದಾಗಿ ಬಾಳಿ : ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಜಿ 

ಜಾತಿಮತವ ಮರೆತು ಒಂದಾಗಿ ಬಾಳಿ : ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಜಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 23 :

 
ದೇವನೊಬ್ಬ ನಾಮ ಹಲವು ನಾಮದ ಹೆಸರಿನಲ್ಲಿ ಕಲಹಗಳಾಗದೇ ಪ್ರೀತಿ,ರೀತಿ ನೀತಿಯಿಂದ ಬಾಳಬೇಕು. ಇರುವುದೊಂದೆ ಬದುಕು ಜಾತಿಮತವ ಮರೆತು ಒಂದಾಗಿ ಬಾಳಬೇಕು ಎಂದು ಸಾವಳಗಿ ಜಗದ್ಗುರು ಶಿವಲಿಂಗೇಶ್ವರ ಮಠದ ಶ್ರೀಮನ್‍ಮಹಾರಾಜ ನಿರಂಜನ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳು ಹೇಳಿದರು.

ಮಂಗಳವಾರದಂದು ತಾಲೂಕಿನ ಕುಂದರಗಿಯ ಅಡವಿಸಿದ್ದೇಶ್ವರ ಮಠದ ಶ್ರೀ ಅಡವಿಸಿದ್ದೇಶ್ವರ ಜಾತ್ರ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಕುಂದರನಾಡೋತ್ಸವ-2022 ಉದ್ಘಾಟನೆ ಹಾಗೂ ಭಾವೈಕ್ಯ ಸಮ್ಮೇಳನ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮನುಷ್ಯನು ನಡೆ-ನುಡಿಯಿಂದ ಒಂದಾಗಿಬಾಳಿದರೆ ಮಾತ್ರ ಬದುಕಿಗೆ ಅರ್ಥ ಸಿಗುತ್ತದೆ. ನಡೆನುಡಿ ವ್ಯತ್ಯಾಸವಾದಲ್ಲಿ ಬದುಕು ಭಾರವಾಗುತ್ತೆ. ಯಾವುದೇ ಧಾರ್ಮಿಕ ಆಚರಣೆಗಳು ಆತ್ಮೋದ್ದಾರವಾಗಿರಬೇಕೆ ವಿನಃ ಡಾಂಭಿಕ ಆಚರಣೆಯಾಗಿರಬಾರದು. ಶ್ರೀಮಠದ ಪೂಜ್ಯರು ಕಿರಿಯ ವಯಸ್ಸಿನಲ್ಲಿ ಈ ಭಾಗದಲ್ಲಿ ಹಲವಾರು ಸಾಮಾಜಿಕ-ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಕಾರ್ಯ ಎಲ್ಲರಿಗೂ ಮಾದರಿಯಾಗಲಿ ಎಂದರು.
ಶೂನ್ಯಸಂಪಾದನಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಸರ್ವ ಧರ್ಮದವರನ್ನು ಏಕತೆಯಿಂದ ಕಾಣುವ ಏಕೈಕ ದೇಶ ನಮ್ಮ ಭಾರತ. ನಮ್ಮ ಧರ್ಮವನ್ನು ಪ್ರೀತಿಸಿ ಅನ್ಯ ಧರ್ಮದವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಸಮಾಜದಲ್ಲಿ ದುಖಃದಲ್ಲಿರುವವರು, ಸಮಸ್ಯೆಯಲ್ಲಿರುವವರನ್ನು ಮೇಲಕ್ಕೆ ಎತ್ತುವುದೇ ನಿಜವಾದ ಧರ್ಮ ಎಂದರು.
ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಉದ್ಘಾಟಿಸಿದರು.
ಹುಕ್ಕೇರಿ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು, ಪಾಶ್ಚಾಪುರದ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ಚಾಮಿಗಳು, ಮೂಲಗದ್ದೆಯ ಚನ್ನಬಸವ ಮಹಾಸ್ವಾಮಿಗಳು, ವಿಶ್ವನಾಥ ದೇವರು ಚರಂತಿಮಠ ಕುಂದರಿಗಿ, ಮೌಲಾನಾ ಅಲ್ಲಮಖಾನ ದೇಸಾಯಿ, ಸಿಸ್ಟರ್ ಫಾತೀಮಾ ಡೇವಿಡ್, ರಾಜಕೀಯ ಧುರೀಣರಾದ ಭೀಮನಗೌಡ ಪೋಲಿಸ್‍ಗೌಡ್ರು ಸೇರಿದಂತೆ ಭಕ್ತಾಧಿಗಳು ಇದ್ದರು.

Related posts: