RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರ ಪ್ರತಿಭಟನೆ

ಗೋಕಾಕ:ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರ ಪ್ರತಿಭಟನೆ 

ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 1

 

ಕನ್ಹಯ್ಯಾ ಲಾಲ್ ಹತ್ಯೆ ಮಾಡಿ ಪ್ರಧಾನಿ ನರೇಂದ್ರ ಮೋಸಿಯವರಿಗೆ ಜೀವ ಬೇದರಿಕೆ ಹಾಕಿರುವದನ್ನು ಖಂಡಿಸಿ ಇಲ್ಲಿಯ ಶ್ರೀರಾಮ ಸೇನೆಯ ಕಾರ್ಯಕರ್ತರು ಶುಕ್ರವಾರದಂದು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.
ಶ್ರೀರಾಮ ಸೇನೆಯ ಅಧ್ಯಕ್ಷ ರವಿ ಪೂಜೇರಿ ಮಾತನಾಡಿ, ರಾಜಸ್ಥಾನದ ಉದಪುರ ನಿವಾಸಿ ಕನ್ಹಯ್ಯಲಾಲ್ ಅವರನ್ನು ಮತಾಂದರು ಅಮನುಷವಾಗಿ ಕೊಲೆ ಮಾಡಿ, ದೇಶದ ಪ್ರಧಾನಿಯವರಿಗೆ ಬೇದರಿಕೆಯೊಡ್ಡಿದ್ದು ಗಂಭೀರ ಪ್ರಕರಣ, ಇದರ ಹಿಂದೆ ದೊಡ್ಡ ಜಾಲವೇ ಇದ್ದು ಆರೋಪಿಗಳಿಗೆ ಗಲ್ಲು ಶಿಕ್ಷೆ ಅಥವಾ ಎನ್-ಕೌಂಟರ್ ಮಾಡಬೇಕೆಂದು ಆಗ್ರಹಿಸಿದರು.
ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದ ಒಂದೇ ಕಾರಣಕ್ಕೆ ಹತ್ಯೆ ಮಾಡಲು ಮುಂದಾಗುತ್ತಿರುವದು ಖಂಡನೀಯ. ಕೊಲೆಯಾದ ಕನ್ಹಯ್ಯಲಾಲ ಅವರಿಗೆ ರಾಜಸ್ಥಾನ ಸರಕಾರ 50ಲಕ್ಷ ರೂ, ಸಹಾಯಧನ ನೀಡಬೇಕು ಎಂದರು.
ಪ್ರತಿಭಟನೆಯಲ್ಲಿ ಬಸವರಾಜ ಪಡತಾರೆ, ಮಂಜು ತೇಲಿ, ವಿಠ್ಠಲ ಗಣಾಚಾರಿ, ರಾಘವ ಪೂಜೇರಿ, ಶಿವು ಹಟ್ಟಿ, ಬಸವರಾಜ ವಡೇರ, ಶಿವು ಪೂಜೇರಿ, ಪ್ರವೀಣ ಹೂವನ್ನವರ ಸೇರಿದಂತೆ ಶ್ರೀರಾಮ ಸೇನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: