ಮೇ 11 ರಂದು ಕುಮಾರಸ್ವಾಮಿ ಗೋಕಾಕಿಗೆ :: ಜೆಡಿಎಸ್ ನ ವಗ್ಗನ್ನವರ ಮಾಹಿತಿ
ಮೇ 11 ರಂದು ಕುಮಾರಸ್ವಾಮಿ ಗೋಕಾಕಿಗೆ :: ಜೆಡಿಎಸ್ ನ ವಗ್ಗನ್ನವರ ಮಾಹಿತಿ
ಗೋಕಾಕ ಮೇ 8:: ಗ್ರಾಮ ವಾಸ್ತವ್ಯದ ಹರಿಕಾರ , ರೈತರ ಹಿತೈಷಿಗಳು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಅವರು ಇದೆ 11ರಂದು ಗೋಕಾಕ ತಾಲೂಕಿನ ಕುಲಗೋಡ ಗ್ರಾಮಕ್ಕೆ ಆಗಮಿಸಲಿದ್ದಾರೆ ಎಂದು ಜೆಡಿಎಸ್ ನ ಚನ್ನಪ್ಪ ವಗ್ಗನ್ನವರ ತಿಳಿಸಿದ್ದಾರೆ .
ಇಂದು ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಕರೆದ್ದಿದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಕೆಲವರು ಜೆಡಿಎಸ್ ಪಕ್ಟಕ್ಕೆ ದ್ರೋಹ ಬಗೆದು ಪಕ್ಷಾಂತರವಾದ ಹಿನ್ನಲೆಯಲ್ಲಿ ಕಳೆದ ಸುಮಾರು ಹತ್ತು ವರ್ಷಗಳಿಂದ ಅರಭಾವಿ ಮತಕ್ಷೇತ್ರದಲ್ಲಿ ಪಕ್ಷದ ಶಕ್ತಿ ಕ್ಷೀಣಿಸಿದೆ ಮೂಲ ಜೆಡಿಎಸ್ ಕಾರ್ಯಕರ್ತರನ್ನು ಸೇರಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೆವೆಂದು ಪರೋಕ್ಷವಾಗಿ ಮಾಜಿ ಸಚಿವ ಬಾಲಚಂದ್ರ ಅವರಿಗೆ ಟಾಂಗ್ ನೀಡಿದರು.
ಕಳೆದ ಒಂದು ವರ್ಷದ ಅವದಿಯಲ್ಲಿ ಸುಮಾರು 2000 ಹೋಸ ಸದ್ಯಸರನ್ನು ಮಾಡಿಕೊಳ್ಳಲಾಗಿದೆ ಸಮಾವೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಯ ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾಗಲ್ಲಿದ್ದಾರೆ .ಕಾರ್ಯಕರ್ತರಲ್ಲಿ ಹೋಸ ಹುಮ್ಮಸ್ಸು ತುಂಬಲು ಸಮಾವೇಶ ಹಮ್ಮಿಕೊಳಲಾಗಿದೆ ಸಮಾವೇಶದಲ್ಲಿ ಪಕ್ಷದ ಮುಖಂಡರಾದ ಬಸವರಾಜ ಹೊರಟ್ಟಿ ,ಬಂಡೇಪ್ಪಾ ಖಾಶಂಪೂರ , ಮಧು ಬಂಗಾರಪ್ಪ ,ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಸೇರಿದಂತೆ ಅನೇಕ ನಾಯಕರು ಭಾಗಿಯಾಗಲ್ಲಿದ್ದಾರೆಂದು ವಗ್ಗನ್ನವರ ತಿಳಿಸಿದ್ದಾರೆ .
ಮೋನ್ನೆಯಷ್ಟೇ ರಾಯಚೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಕಾಂಗ್ರೆಸ್ ನ ಸತೀಶ ಜಾರಕಿಹೊಳಿ ಬೇಟ್ಟಿಯಾಗಿ ಪ್ರಸ್ತುತ ರಾಜಕೀಯ ವಿಧ್ಯಮಾನಗಳ ಬಗ್ಗೆ ಸುರ್ಧಿಘವಾಗಿ ಚರ್ಚಿಸಿದ್ದರು ಇದರ ಬೆನ್ನಲ್ಲೇ ಕುಮಾರಸ್ವಾಮಿ ಗೋಕಾಕ ತಾಲೂಕಿಗೆ ಬೇಟ್ಟಿ ನೀಡುತ್ತಿರುವುದು ತೀವ್ರ ಕುತೂಹಲ ಕೇರಳಿಸಿದೆ.
ಪತ್ರಿಕಾ ಗೋಷ್ಠಿಯಲ್ಲಿ ಜೆಡಿಎಸ್ ನ ಸತೀಶ ವಂಟಗೂಡಿ, ಧರೀಶ ಖಾನಗೌಡರ , ನೇಮು ಚಿಕ್ಕೋಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು. published May 8