RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಸತೀಶ ಶುಗರ್ಸ್ ಲಿಮಿಟೆಡ್ ನ ಮಾಜಿ ಎಂ.ಡಿ ಸಿದ್ದಾರ್ಥ ವಾಡೆನ್ನವರ ಬಿಜೆಪಿ ಸೇರ್ಪಡೆ

ಗೋಕಾಕ:ಸತೀಶ ಶುಗರ್ಸ್ ಲಿಮಿಟೆಡ್ ನ ಮಾಜಿ ಎಂ.ಡಿ ಸಿದ್ದಾರ್ಥ ವಾಡೆನ್ನವರ ಬಿಜೆಪಿ ಸೇರ್ಪಡೆ 

ಸತೀಶ ಶುಗರ್ಸ್ ಲಿಮಿಟೆಡ್ ನ ಮಾಜಿ ಎಂ.ಡಿ ಸಿದ್ದಾರ್ಥ ವಾಡೆನ್ನವರ ಬಿಜೆಪಿ ಸೇರ್ಪಡೆ

 

ನಮ್ಮ ಬೆಳೆಗಾವಿ ಇ – ವಾರ್ತೆ, ಗೋಕಾಕ ಸೆ 29 :

 

ಕಳೆದ 2 ದಶಕಗಳಿಂದ ಹೆಚ್ಚುಕಾಲ ಶಾಸಕ ಸತೀಶ ಜಾರಕಿಹೊಳಿ ಅವರ ಒಡೆತನದ ಸತೀಶ ಶುಗರ್ಸ ಕಾರಖಾನೆಯ ಮ ಎಂ. ಡಿ ಯಾಗಿ ಕಾರ್ಯನಿರ್ವಸಿದ್ದ ಇಲ್ಲಿನ ಸಿದ್ದಾರ್ಥ ವಾಡೆನ್ನವರ ಅವರು ಬುಧವಾರದಂದು ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು.

ಕಾಗವಾಡ ಮತಕೇತ್ರದ ಬೂತ ಮಟ್ಟದ ಕಾರ್ಯಕರ್ತರ ಸಭೆಗೆ ಆಗಮಿಸಿದ್ದ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟಿಲ್ ಅವರು ಪಕ್ಷದ ಶಲ್ಯೆ ಹಾಕುವುದರ ಮುಖಾಂತರ ಪಕ್ಷಕ್ಕೆ ವಾಡೆನ್ನವರ ಅವರನ್ನು ಅಧಿಕೃತವಾಗಿ ಬರಮಾಡಿಕೊಂಡರು. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ಅಥಣಿ ಶಾಸಕ ಮಹೇಶ ಕುಮಠಳ್ಳಿ, ಮಾಜಿ ಸಚಿವ ಶಶಿಕಾಂತ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡ ಸಿದ್ದಾರ್ಥ ವಾಡೆನ್ನವರ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರುವ ಅವರು ಭಾರತ ಮಾತೆಯ ಸೇವೆಯ ಉತ್ಸುಕದಲ್ಲಿದ್ದ ನನಗೆ ಅವಕಾಶ ನೀಡಿದ ಮತ್ತು ಬೆಂಬಲ ವ್ಯಕ್ತಪಡಿಸಿದ ಎಲ್ಲಾ ನಾಯಕರಿಗೆ , ಕಾರ್ಯಕರ್ತರಿಗೆ ಮತ್ತು ನನ್ನೆಲ್ಲಾ ಆತ್ಮೀಯರಿಗೆ ಅಭಿನಂದನೆಗಳನ್ನು ಸಲ್ಲಿಸಿರುವ ಅವರು ಪಕ್ಷ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಪಕ್ಷವನ್ನು ಬಲಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡತೇನೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
.

Related posts: