RNI NO. KARKAN/2006/27779|Saturday, October 19, 2024
You are here: Home » breaking news » ಪಾಶ್ಚಾಪೂರ :ಶಾಸಕ ಸತೀಶ ಜಾರಕಿಹೊಳಿ ಅವರು ಕ್ಷೇತ್ರದಲ್ಲಿ ಎಲ್ಲಾ ಸಮಾಜವನ್ನು ಒಗ್ಗೂಡಿಸಿಕೊಂಡು ಸಮಾಜಮುಖಿಯಾಗಿ ಕಾರ್ಯಮಾಡುತ್ತಿದ್ದಾರೆ : ಸನತ್ ಜಾರಕಿಹೊಳಿ

ಪಾಶ್ಚಾಪೂರ :ಶಾಸಕ ಸತೀಶ ಜಾರಕಿಹೊಳಿ ಅವರು ಕ್ಷೇತ್ರದಲ್ಲಿ ಎಲ್ಲಾ ಸಮಾಜವನ್ನು ಒಗ್ಗೂಡಿಸಿಕೊಂಡು ಸಮಾಜಮುಖಿಯಾಗಿ ಕಾರ್ಯಮಾಡುತ್ತಿದ್ದಾರೆ : ಸನತ್ ಜಾರಕಿಹೊಳಿ 

ಶಾಸಕ ಸತೀಶ ಜಾರಕಿಹೊಳಿ ಅವರು ಕ್ಷೇತ್ರದಲ್ಲಿ ಎಲ್ಲಾ ಸಮಾಜವನ್ನು ಒಗ್ಗೂಡಿಸಿಕೊಂಡು ಸಮಾಜಮುಖಿಯಾಗಿ ಕಾರ್ಯಮಾಡುತ್ತಿದ್ದಾರೆ : ಸನತ್ ಜಾರಕಿಹೊಳಿ

ಪಾಶ್ಚಾಪೂರ ಮಾ 11 : ಶಾಸಕ ಸತೀಶ ಜಾರಕಿಹೊಳಿ ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವದರೊಂದಿಗೆ ಎಲ್ಲಾ ಸಮಾಜವನ್ನು ಒಗ್ಗೂಡಿಸಿಕೊಂಡು ಸಮಾಜಮುಖಿಯಾಗಿ ಕಾರ್ಯಮಾಡುತ್ತಿದ್ದಾರೆ ಎಂದು ಯುವ ನಾಯಕ ಸನತ್ ಜಾರಕಿಹೊಳಿ ಹೇಳಿದರು
ಶನಿವಾರದಂದು ಯಮಕನಮರಡಿ ಮತಕ್ಷೇತ್ರದ ಬಸ್ಸಾಪೂರ ಗ್ರಾಮದಲ್ಲಿ ಮಾವನೂರ, ಹಳೆವಂಟಮೂರಿ , ಪರಕನಟ್ಟಿ ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು
ಮತಕ್ಷೇತ್ರದಲ್ಲಿ ಯಾವುದೇ ಕುಂದುಕೊರತೆಗಳು ಬಂದರೆ ಅದನ್ನು ಸರಿಪಡಿಸಿಕೊಂಡು ಯಮಕನಮರಡಿ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿಯನ್ನಾಗಿ ಮಾಡೋಣ. ಪ್ರತಿಸ್ವರ್ಧಿಯನ್ನು ಕಡಿಮೆ ಎಂದು ಭಾವಿಸದೆ ನಾವೆಲ್ಲರೂ ಕೂಡಿ ಈ ಬಾರಿ ಸತೀಶ ಜಾರಕಿಹೊಳಿ ಅವರನ್ನು ಅತಿ ಹೆಚ್ಚಿನ ಮತಗಳಿಂದ ಮತ್ತೊಮ್ಮೆ ಶಾಸಕರನ್ನಾಗಿ ಮಾಡೋಣ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಮತ್ತಷ್ಟು ಶಕ್ತಿ ತುಂಬಬೇಕು . ಯುವಕರು ಹಾಗೂ ಹಿರಿಯರು ಕೂಡಿಕೊಂಡು ಮತ್ತೊಮ್ಮೆ ಸತೀಶ ಜಾರಕಿಹೊಳಿ ಅವರನ್ನು ಗೆಲ್ಲಿಸೋಣ ಎಂದ ಅವರು ರಾಹುಲ್ ಜಾರಕಿಹೊಳಿ ಮತ್ತು ನಾನು ಕೂಡಿಕೊಂಡು ಎಲ್ಲಾ ಸಮಾಜದವರ ಬೆನ್ನೆಲುಬಾಗಿ ಇರುತ್ತೇವೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಜಿಪಂ ಮಾಜಿ ಸದಸ್ಯ ಮಂಜುಗೌಡ ಪಾಟೀಲ ಮಾತನಾಡಿ ಯಮಕನಮರಡಿ ಕ್ಷೇತ್ರದ ಪ್ರತಿ ಮನೆಮನೆಗೆ ಹೋಗಿ ಸತೀಶ ಜಾರಕಿಹೊಳಿ ಅವರ ಪರ ಮತವನ್ನು ಕೇಳುವ ಕಾರ್ಯವನ್ನು ಭೂತಮಟ್ಟದಲ್ಲಿ ಮಾಡಬೇಕು. ಪ್ರತಿಯೊಬ್ಬ ಯುವಕರು ಸಕ್ರಿಯವಾಗಿ, ಒಗ್ಗಟಿನಿಂದ ಸತೀಶ್ ಜಾರಕಿಹೊಳಿ ಅವರ ಪರವಾಗಿ ನಿಲ್ಲೋಣ ಎಂದು ಹೇಳಿದರು. ಸನತ್ ಜಾರಕಿಹೊಳಿ ಅವರು ಬರುವಿಕೆಯಿಂದ ಕ್ಷೇತ್ರದಲ್ಲಿ ಯುವಕರಲ್ಲಿ ಉತ್ಸಾಹ ಮೂಡಿದೆ ಎಂದು ಹೇಳಿದರು.
ಮಾವನೂರ ಗ್ರಾಮದದ ಹಿರಿಯ ಮುಖಂಡರಾದ ಅಡಿವೇಪ್ಪ ನಾಯಿಕ, ಕುಮಾರ ಗುಡಗನಟ್ಟಿ, ಶಿವಕುಮಾರ್ ಗುಡುಗನಟ್ಟಿ, ಶಿವಪ್ಪ ಈರನಟ್ಟಿ, ಯಲ್ಲನಾಯ್ಕ ನಾಯ್ಕ, ಸತ್ಯಪ್ಪ ಲಕ್ಕಿ, ಕೆಂಪ್ಪಣ್ಣ ಪೂಜೇರಿ, ಪರಶುರಾಮ ಲಗಮ್ಮಗೋಳ, ಪರಕನಹಟ್ಟಿ ಗ್ರಾಮದ ಮುಖಂಡರಾದ ಅಡಿವೆಪ್ಪ ನಾಯ್ಕ, ವೀರಬದ್ರಪ್ಪ ಸುಲ್ತಾನಪೂರಿ, ಈಶ್ವರ ಮುನ್ನೋಳ್ಳಿ, ಪಯಮೇಶ ಕೌಜಲಗಿ, ಶ್ರೀಕಾಂತ ಬುಡಗಿಗಟ್ಟಿ, ವಿಠಲ ಮುನ್ನೋಳ್ಳಿ, ಇಸ್ಲಾಂಪರ ಮತ್ತು ಶಾಬಂದರ ಗ್ರಾಮದ ಮುಖಂಡರುಗಳಾದ ಹನುಮಂತ ದಾಸ, ಮಕ್ತಮಸಾಬ, ಲಗಮಪ್ಪ ಪನಗುತ್ತಿ , ರಾಮಚಂದ್ರ ನಾಯಕ , ಮೈಯನೊದ್ದೀನ ಸಾಬ, ಬಸ್ಸಾಪೂರ ಗ್ರಾಮದ ಮುಖಂಡರಾದ ಬಸವರಾಜ ಕರೋಳಿ, ಭೀಮಶಿ ಕಳ್ಳಿಮನಿ, ಪಾಂಡು ಗುರುವರ, ಲಗಪ್ಪನ ಗುರವ್, ಸುರೇಶ ಕುಟಭೀಮಗೋಳ, ಇಮಾಮಹುಸೇನ ನಾಯಿಕ, ರಫೀಕ್ ನಾಯಿಕ, ನಾಗರಾಜ ಗೋಪಾಲಪ್ಪಗೋಳ, ಮಹಾಂತೇಶ ಗೋವಿಂದಪ್ಪಗೋಳ, ಮಾರುತಿ ಗೋಪಾಲಪ್ಪಗೋಳ, ಯಲಪ್ಪ ಗೋವಿಂದಪ್ಪಗೋಳ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು .

Related posts:

ಗೋಕಾಕ:ರೈತರಿಂದ ನೇರವಾಗಿ ಗೋವಿನ ಜೋಳವನ್ನು ಖರೀದಿಸುವಂತೆ ಆಗ್ರಹ : ರೈತ ಸಂಘ , ಹಸಿರು ಸೇನೆಯ ಕಾರ್ಯಕರ್ತರಿಂದ ಪ್ರತಿಭಟ…

ಗೋಕಾಕ:ಗೋಕಾದಲ್ಲಿ ಬಂಡೆ ಕುಸಿತ,ಆತಂಕದಲ್ಲಿ ಸಾರ್ವಜನಿಕರು : ಬಂಡೆಕಲ್ಲು ತೆರುವಿಗೆ ಸುರಕ್ಷಿತ ಕ್ರಮ ಲಖನ್ ಜಾರಕಿಹೊಳಿ

ಗೋಕಾಕ:ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಗರದಲ್ಲಿ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರ ಬೃಹತ್ ಪ್ರತಿಭಟನೆ