ಗೋಕಾಕ:ಹೊಳೆಯಲ್ಲಿ ಕಾಲು ಜಾರಿ ಬಿದ್ದು ಬಾಲಕಿ ಸಾವು
ಹೊಳೆಯಲ್ಲಿ ಕಾಲು ಜಾರಿ ಬಿದ್ದು ಬಾಲಕಿ ಸಾವು
ಗೋಕಾಕ ಮೇ 27 : ಇಲ್ಲಿನ ಘಟಪ್ರಭಾ ಹೊಳೆಯಲ್ಲಿ ಕಾಲು ಜಾರಿ ಬಿದ್ದು ಬಾಲಕಿಯೋರ್ವಳು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.
ಕುಮಾರಿ ವೈಭವಿ ಪ್ರದೀಪ್ ಗಡಕರಿ (12) ಮೃತಪಟ್ಟ ದುರ್ದೈವಿಯಾಗಿದ್ದು, ಇವಳು ಸ್ನಾನಕ್ಕೆಂದು ತನ್ನ ಚಿಕ್ಕಪ್ಪನೊಂದಿಗೆ ಘಟಪ್ರಭಾ ನದಿಯಲ್ಲಿ ನದಿಗೆ ತೆರಳಿದ್ದಳು. ಸ್ನಾನವಾದ ನಂತರ ಬಟ್ಟೆ ತೊಳೆಯಲು ನದಿಗೆ ಇಳಿದಾಗ ಕಾಲು ಜಾರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಧಾರಣ ಘಟನೆ ಜರುಗಿದ್ದು, ನುರಿತ ಈಜು ಪಟುಗಳು ಆಗಮಿಸಿ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಈ ಕುರಿತು ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.