ಗೋಕಾಕ:ಹಡಪದ ಅಪ್ಪಣನವರು ಮಾನವೀಯತೆಯನ್ನು ಮೆರೆದ ಮಹಾ ಶರಣರಾಗಿದ್ದರು : ಸಂಸದೆ ಪ್ರಿಯಾಂಕಾ ಜಾರಕಿಹೊಳಿ
ಹಡಪದ ಅಪ್ಪಣನವರು ಮಾನವೀಯತೆಯನ್ನು ಮೆರೆದ ಮಹಾ ಶರಣರಾಗಿದ್ದರು : ಸಂಸದೆ ಪ್ರಿಯಾಂಕಾ ಜಾರಕಿಹೊಳಿ
ಗೋಕಾಕ ಜು 20 : ವಿಶ್ವಗುರು ಬಸವಣ್ಣನವರ ಆಪ್ತರಾದ ಹಡಪದ ಅಪ್ಪಣನವರು ಮಾನವೀಯತೆಯನ್ನು ಮೆರೆದ ಮಹಾ ಶರಣರಾಗಿದ್ದು, ಅವರ ಆದರ್ಶವನ್ನು ಎಲ್ಲರೂ ಆಚರಣೆಗೆ ತರುವಂತೆ ಸಂಸದೆ ಪ್ರಿಯಾಂಕಾ ಹೇಳಿದರು.
ಶನಿವಾರದಂದು ನಗರದ ಸಮುದಾಯ ಭವನದಲ್ಲಿ ಹಡಪದ ಸಮಾಜ ಭಾಂಧವರು ಆಯೋಜಿಸಿದ್ದ 890ನೇ ಅಪ್ಪಣನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶರಣರ ವಚನಗಳು ಸರ್ವರಿಗೂ, ಸರ್ವಕಾಲಕ್ಕೂ ಆದರ್ಶವಾಗಿದ್ದು, ಅವುಗಳ ಆಚರಣೆ ಅತೀ ಅವಶ್ಯಕವಾಗಿದೆ ಎಂದ ಅವರು ಸಮಾಜ ಭಾಂಧವರು ಶಿಕ್ಷಣಕ್ಕೆ ಮಹತ್ವ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿ, ಪ್ರೋತ್ಸಾಹಿಸುವ ಈ ಕಾರ್ಯ ಮಾದರಿಯಾಗಿದೆ ಸಮಾಜದ ಪ್ರಗತಿಗಾಗಿ ಸದಾ ಸಹಕಾರ ನೀಡುವುದಾಗಿ ಹೇಳಿದರು.
ವೇದಿಕೆಯಲ್ಲಿ ಸಮಾಜದ ಅಧ್ಯಕ್ಷ ಸಿದ್ದಪ್ಪ ಅಪ್ಪಣ, ಡಾ.ಸಿ.ಕೆ.ನಾವಲಗಿ, ಈಶ್ವರಚಂದ್ರ ಬೆಟಗೇರಿ, ಈಶ್ವರ ಮಮದಾಪೂರ ಸೇರಿದಂತೆ ಸಮಾಜ ಭಾಂಧವರು ಇದ್ದರು.