RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಪ್ರವಾಹ ಹಿನ್ನೆಲೆ : ಚಿಕ್ಕೋಳಿ ಸೇತುವೆ ಮುಳುಗಡೆ : ಸಂಚಾರ ಬಂದ್, ಎಪಿಎಂಸಿ ಕಾಳಜಿ ಕೇಂದ್ರದಲ್ಲಿ ಅವ್ಯವಸ್ಥೆ : ವರ್ತಕರ ಅಂಗಳದಲ್ಲಿ ನಿರಾಶ್ರಿತರು

ಗೋಕಾಕ:ಪ್ರವಾಹ ಹಿನ್ನೆಲೆ : ಚಿಕ್ಕೋಳಿ ಸೇತುವೆ ಮುಳುಗಡೆ : ಸಂಚಾರ ಬಂದ್, ಎಪಿಎಂಸಿ ಕಾಳಜಿ ಕೇಂದ್ರದಲ್ಲಿ ಅವ್ಯವಸ್ಥೆ : ವರ್ತಕರ ಅಂಗಳದಲ್ಲಿ ನಿರಾಶ್ರಿತರು 

ಪ್ರವಾಹ ಹಿನ್ನೆಲೆ : ಚಿಕ್ಕೋಳಿ ಸೇತುವೆ ಮುಳುಗಡೆ : ಸಂಚಾರ ಬಂದ್, ಎಪಿಎಂಸಿ ಕಾಳಜಿ ಕೇಂದ್ರದಲ್ಲಿ ಅವ್ಯವಸ್ಥೆ : ವರ್ತಕರ ಅಂಗಳದಲ್ಲಿ ನಿರಾಶ್ರಿತರು

ಎಪಿಎಂಸಿ ವರ್ತಕರೊಬ್ಬರ ಅಂಗಳದಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರು

ಗೋಕಾಕ ಜು 27 : ಮಹಾರಾಷ್ಟ್ರದಲ್ಲಿ ಸತತ ಸುರಿಯುತ್ತಿರುವ ಮಳೆಯಿಂದಾಗಿ ಗೋಕಾಕ ನಗರದಲ್ಲಿ ಹರಿಯುವ ಘಟಪ್ರಭಾ, ಹಿರಣ್ಣಕೇಶಿ, ಮಾರ್ಕಂಡೇಯ ನದಿಗಳ ಅಪಾಯಮಟ್ಟವನ್ಞು ಮೀರಿ ಹರಿಯುತ್ತಿರುವ ಪರಿಣಾಮ ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಚಿಕ್ಕೋಳಿ ಸೇತು ಮೇಲೆ ನೀರು ನುಗ್ಗಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಸ್ಥಳಕ್ಕೆ ತಹಶೀಲ್ದಾರ ಡಾ‌.ಮೋಹನ ಭಸ್ಮೆ , ಮಾಜಿ ಜಿಪಂ ಸದಸ್ಯ ಟಿ.ಆರ್.ಕಾಗಲ್, ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಸನದಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಮಧ್ಯಾಹ್ನ 12 ಘಂಟೆಯ ವೇಳೆಗೆ ಹಿಡಕಲ್ ಜಲಾಶಯದಿಂದ 44 ಸಾವಿರ ಕ್ಯೂಸೆಕ್ಸ, ಹಿರಣ್ಣಕೇಶಿ ನದಿಯಿಂದ 24 ಸಾವಿರ ಕ್ಯೂಸೆಕ್ಸ, ಶಿರೂರು ಜಲಾಶಯ ( ಮಾರ್ಕಂಡೇಯ) 8 ಸಾವಿರ ಕ್ಯೂಸೆಕ್ಸ, ಹಾಗೂ ಬಳ್ಳಾರಿ ನಾಲಾದಿಂದ 3 ಸಾವಿರ ಕ್ಯೂಸೆಕ್ಸ ಒಟ್ಟು 79 ಸಾವಿರ ಕ್ಯೂಸೆಕ್ಸ ನೀರು ಘಟಪ್ರಭಾ ನದಿಗೆ ಹರಿದು ಬುತ್ತಿರುವ ಪರಿಣಾಮ ನಗರದ ಹಳೆ ದನಗಳ ಪೇಠೆ, ಡೋರ ಓಣಿ, ದಾಳಂಬ್ರಿ ತೋಟ್, ಮಟನ್ ಮಾರ್ಕೆಟ್, ಉಪ್ಪಾರ ಓಣಿ, ಬೋಜಗರ ಓಣಿ, ಕುಂಬಾರ ಓಣಿ ಸೇರಿದಂತೆ ಅನೇಕ ಕಡೆಗಳಲ್ಲಿ ನದಿ ನೀರು ನುಗ್ಗಿದ್ದು, ಈ ಪ್ರದೇಶಗಳಲ್ಲಿ ವಾಸಿಸುವ ಜನರು ಅವಶ್ಯಕ ಸಾಮಾಗ್ರಿಗಳನ್ನು ತಗೆದುಕೊಂಡು ತಾಲೂಕು ಆಡಳಿತ ವತಿಯಿಂದ ತೆರೆದಿರುವ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಜನರನ್ನು ಚದುರಿಸಲು ಪೊಲೀಸರ ಹರಸಹಾಸ : ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಹಾಮಳೆಯ ಪರಿಣಾಮ ನಗರದಲ್ಲಿ ನೀರು ನುಗ್ಗಿ, ನಗರಕ್ಕೆ ಸಂಪರ್ಕ ಕಲ್ಪಿಸುವ ಲೋಳಸೂರ, ಚಿಕ್ಕೋಳಿ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಮುಳುಗಡೆಯಾಗಿರುವ ಸೇತುವೆಗಳನ್ನು ನೋಡಲು ಜನರು ತಂಡೋಪತಂಡವಾಗಿ ಬರುತ್ತಿರುವ ಪರಿಣಾಮ ಅವರನ್ನು ನದಿ ದಡದಲ್ಲಿ ತೆರಳದಂತೆ ಚುದುರಿಸಲು ಪೊಲೀಸರು ಹರಸಹಾಸ ಪಡುತ್ತಿದ್ದಾರೆ. ಪಿಎಸ್ಐ ಕೆ.ವಾಲಿಕರ ಅವರ ನೇತೃತ್ವದಲ್ಲಿ ನಗರದ ನದಿ ತೀರದ ಪ್ರದೇಶಗಳಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಕಾಳಜಿ ಕೇಂದ್ರದ ಮೋರೆ ಹೋದ ಜನರು : ಪ್ರವಾಹ ಪೀಡತ ಪ್ರದೇಶದ ಜನರು ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ತಾಲೂಕು ಆಡಳಿತ ವತಿಯಿಂದ ನಗರದಲ್ಲಿ ಸದ್ಯದ ಮಟ್ಟಿಗೆ ನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮತ್ತು ಎಪಿಎಂಸಿಯಲ್ಲಿ ಕಾಳಜಿ ಕೇಂದ್ರಗಳನ್ನು ತೆರಲಾಗಿದ್ದು, ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಧ್ಯಾಹ್ನದ ವೇಳೆಗೆ 110 ಕುಟುಂಬಗಳ 400 ಜನರು ಆಶ್ರಯ ಪಡೆದಿದ್ದಾರೆ. ಎಪಿಎಂಸಿಯಲ್ಲಿ ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರದಲ್ಲಿ 45 ಕುಟುಂಬದ ಒಟ್ಟು 150 ಜನರು ಆಶ್ರಯ ಪಡೆದುಕೊಂಡಿದ್ದಾರೆ. ಆಶ್ರಯ ಕೇಂದ್ರದಲ್ಲಿ ತಾಲೂಕು ಆಡಳಿತದ ವತಿಯಿಂದ ಆಹಾರ ಧಾನ್ಯಗಳನ್ನು ವಿತರಿಸಲಾಗಿದ್ದು, ಶಿಕ್ಷಣ ಇಲಾಖೆಯ ಮಧ್ಯಾಹ್ನ ಬಿಸಿಯೂಟದ ಸಿಬ್ಬಂದಿಗಳು ರುಚಿಕರವಾದ ಬೋಜನವನ್ನು ತಯಾರಿಸಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದ ಜನರಿಗೆ ಊಟವನ್ನು ಬಡಿಸುತ್ತಿದ್ದಾರೆ.

ಅಸ್ತವ್ಯಸ್ತವಾಗಿರುವ ಎಪಿಎಂಸಿ ಕಾಳಜಿ ಕೇಂದ್ರ : ನಗರದಲ್ಲಿ ತಾಲೂಕು ಆಡಳಿತದ ವತಿಯಿಂದ ತೆರೆಯಲಾಗಿರುವ ಕಾಳಜಿ ಕೇಂದ್ರದಲ್ಲಿ ಜನರು ಹೆಸರು ನೋಂದಾಣಿಯಿಸಿಕೊಂಡಿದ್ದಾರೆ. ಆದರೆ ಅವರಿಗೆ ವಾಸವಾಗಿರಲು ಸರಿಯಾದ ವ್ಯವಸ್ಥೆ ಕಲ್ಪಿಸಲಾಗಿಲ್ಲದ ಪರಿಣಾಮ ನಿರಾಶ್ರಿತರು ಎಂಪಿಎಂಸಿಯಲ್ಲಿರುವ ವರ್ತಕರ ಅಂಗಡಿಗಳ ಮುಂದೆ ತಮ್ಮ ದಿನಬಳಕೆಯ ಅವಶ್ಯಕ ಸಾಮಾನುಗಳೊಂದಿಗೆ ಬಿಡಾರು ಹುಡಿದ್ದಾರೆ. ತಹಶೀಲ್ದಾರ ಡಾ.ಮೋಹನ ಭಸ್ಮೆ ಅವರು ಇತ್ತಕಡೆ ಗಮನ ಹರಿಸಿ ಅವರಿಗೆ ವಾಸಿಸಲು ಸೂಕ್ತ ವಸತಿ ವ್ಯವಸ್ಥೆ ಮಾಡಿಕೊಂಡಬೇಕು ಎಂದು ಎಪಿಎಂಸಿ ಕಾಳಜಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿ ಕೊಂಡವರು ನಿರಾಶ್ರಿತರ ಆಗ್ರಹವಾಗಿದೆ. ಕಳೆದ ಹಲವು ಬಾರಿ ಪ್ರವಾಹ ಬಂದ ಸಂದರ್ಭದಲ್ಲಿ ಎಪಿಎಂಸಿಯಲ್ಲಿ ಕಾಳಜಿಕೇಂದ್ರಕ್ಕೆಂದೆ ಗುರುತಿಸಲಾಗಿರುವ ಕಟ್ಟಡ ಸಂಪೂರ್ಣ ಶಿತಲಾವಸ್ಥೆವಾಗಿದ್ದು, ಹಲವುಕಡೆ ಸ್ಲ್ಯಾಬ್ ಒಡೆದು ಕೆಳಕಡೆ ಬಿಳುತ್ತಿದ್ದೆ. ಇದರ ಪರಿಣಾಮ ಅಲ್ಲಿ ವಾಸಿಸಲು ಜನರು ಹಿಂದೆಟ್ಟು ಹಾಕುತ್ತಿದ್ದು, ಎಂಪಿಎಂಸಿಯಲ್ಲಿರುವ ಸುವ್ಯವಸ್ಥಿತ ಕಟ್ಟಡದಲ್ಲಿ ನಿರಾಶ್ರಿತರಿಗೆ ವಾಸಿಸಲು ಅನುವು ಮಾಡಿಕೊಡಬೇಕು ಎಂಬ ಆಗ್ರಹ ಅಲ್ಲಿ ಹೆಸರು ನೋಂದಾಯಿಸಿಕೊಂಡವರದ್ದಾಗಿದೆ.

ಜಾನುವಾರುಗಳಲ್ಲಿಗೆ ಪಶು ಇಲಾಖೆಯಿಂದ ಲಸಿಕೆ : ಪ್ರವಾಹ ಪೀಡಿತ ಪ್ರದೇಶದ ಜನರು ನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯ ಮತ್ತು ಎಂಪಿಎಂಸಿಯಲ್ಲಿರುವ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದರೆ, ಜಾನುವಾರುಗಳ ಆಶ್ರಯಕ್ಕೆ ಮತ್ತು ಅವರ ಆರೋಗ್ಯ ಚಿಕಿತ್ಸೆಗೂ ಸಹ ತಾಲೂ ಆಡಳಿತ ಮತ್ತು ಪಶು ಸಂಗೋಪಣಾ ಇಲಾಖೆಯಿಂದ ಅವಶ್ಯಕ ಕ್ರಮಗಳನ್ನು ಕೈಗೋಳ್ಳಲಾಗಿದ್ದು, ಪಶು ಸಂಗೋಪಣಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ ಕಮತ ಅವರು ದನ ಕರುಗಳಿಗೆ ಗಂಟಲು ಬೇನೆ ಬರದಂತೆ ಲಸಿಕೆಯನ್ನು ನೀಡಿ ದನಕರುಗಳ ಆರೋಗ್ಯದ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದಾರೆ..

ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು : ಗೋಕಾಕ ನಗರ ಭಾಗಶಃ ಪ್ರವಾಹ ಪೀಡಿತವಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ತಾಲೂಕಿನ ಎಲ್ಲಾ ಅಧಿಕಾರಿಗಳು ಜಿಲ್ಲಾಡಳಿತ ತಮಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿರುವ ದೃಶ್ಯಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಂಡು ಬುರುತ್ತಿವೆ. ಪಿಎಸ್ಐ ಕೆ.ವಾಲಿಕರ ಮತ್ತು ತಂಡ, ನಗರಸಭೆಯ ಪೌರಾಯುಕ್ತ ರಮೇಶ ಜಾಧವ್, ಎಂ.ಎಚ್.ಗಜಾಕೋಶ, ಜಯೇಶ ತಾಂಬೂಳೆ, ಎಇಇ ಪಾಟೀಲ, ಪಶು ಸಂಗೋಪಣಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮೋಹನ ಕಮತ ಮತ್ತು ತಂಡ, ಹೆಸ್ಕಾಂ ಇಲಾಖೆಯ ಎಸ್.ಪಿ.ವರಾಳೆ , ಎಸ್.ಓ ಶ್ರೀಧರ ಯಲಿಗಾರ ಮತ್ತು ತಂಡ, ಆರೋಗ್ಯ ಇಲಾಖೆಯ ಡಾ‌.ಎಂ.ಎಸ್.ಕೊಪ್ಪದ ಮತ್ತು ತಂಡ, ಶಿಕ್ಷಣ ಇಲಾಖೆಯ ಸಿ.ಆರ್.ಪಿ , ಬಿ,ಆರ್‌.ಸಿ ಮತ್ತು ಶಿಕ್ಷಕರ ತಂಡ ಪ್ರವಾಹದಿಂದ ನಿರಾಶ್ರಿತರ ಆಗಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದ ಜನರು ಮತ್ತು ಜಾನುವಾರುಗಳ ಸಂರಕ್ಷಣೆಗೆ ಎಲ್ಲಾ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

Related posts: