ಗೋಕಾಕ:ಮಹಿಳೆಯರು ಮಾಡುವ ಸಾಧನೆಯನ್ನು ಬೇರೆಯಾರು ಮಾಡಲಾರರು : ಕಾಯಕಶ್ರೀ ದೀಪಾ ಕರ್ಮಾಕರ
ಮಹಿಳೆಯರು ಮಾಡುವ ಸಾಧನೆಯನ್ನು ಬೇರೆಯಾರು ಮಾಡಲಾರರು : ಕಾಯಕಶ್ರೀ ದೀಪಾ ಕರ್ಮಾಕರ
ಗೋಕಾಕ ಫೆ 3 : ಮಹಿಳೆಯರು ಮಾಡುವ ಸಾಧನೆಯನ್ನು ಬೇರೆಯಾರು ಮಾಡಲಾರರು, ಅದನ್ನು ಅರಿತು ಮಹಿಳೆಯರು ಮುಂದೆನಡೆಯಬೇಕು ಎಂದು ಅಂತರಾಷ್ಟ್ರೀಯ ಓಲಂಪಿಕ್ಸ ಜಿಮ್ನಾಸ್ಟಿಕ್ ಪದ್ಮಶ್ರೀ ದೀಪಾ ಕರ್ಮಾಕರ ಹೇಳಿದರು.
ಸೋಮವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡ 20 ನೇ ಶರಣ ಸಂಸ್ಕೃತಿ ಉತ್ಸವದ ಮೂರನೇ ದಿನದ ಮಹಿಳಾ ಸಮಾವೇಶದಲ್ಲಿ “ಕಾಯಕಶ್ರೀ” ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು
ನಾವು ನಮ್ಮ ಮನದಿಂದ ಗುರಿಯ ಕಡೆಗೆ ಗಮನ ಹರಿಸಬೇಕು. ಮಹಿಳೆಯರು ಎನನ್ನು ಸಾಧಿಸಲಾರರು ಎಂದು ಗ್ರಾಮಗಳಲ್ಲಿ ಹೇಳುತ್ತಾರೆ ಆದರೆ ಅದನ್ನು ನಾನು ಒಬ್ಬ ಗ್ರಾಮೀಣ ಭಾಗದ ಮಹಿಳೆಯಾಗಿ ಮಾಡಿ ತೋರಿಸಿದ್ದೇನೆ. ಮಹಿಳೆಯರು ಎಂದು ಸೋಲನ್ನು ಸರಳವಾಗಿ ಒಪ್ಪಿಕೊಳ್ಳಬಾರದು. ಮಹಿಳೆಯರು ಇಂದು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಅವರನ್ನು ಸಮಾಜ ಗೌರವಿಸಿ ಧೈರ್ಯ ತುಂಬುವ ಕಾರ್ಯ ಮಾಡಬೇಕು ಆ ಕಾರ್ಯ ಗೋಕಾಕನ ಶ್ರೀ ಶೂನ್ಯ ಸಂಪಾದನ ಮಠ ಮಾಡುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು .
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು
ಈ ಭಾಗದ ಜನರು ಬದುಕುವಂತ ಬದುಕು ಸುಂದರವಾಗಿ ಇಟ್ಟುಕೊಳ್ಳುವಂತೆ ಹೇಳುವ ಉತ್ಸವವೇ ಗೋಕಾಕ ನಾಡಿನ ಶರಣ ಸಂಸ್ಕೃತಿ ಉತ್ಸವ. 12ನೇ ಶತಮಾನದ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಪ್ರಮುಖ ಗೌರವವನ್ನು ಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬೆಂಬತ್ತಿ ಜನ 30 ಸೆಕೆಂಡಿನ ರಿಲ್ಸ ಮಾಡಿ ಜೀವನ ನಡೆಸುತ್ತಿರುವ ಈ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಒಬ್ಬ ಸಾಧಕರಾಗಿ ಮಾಡುವ ಕಾರ್ಯ ಇಂದು ಮಾಡಬೇಕು. ಬಾಂಡರಿ ಹೊಡೆಯುವವರನ್ನು ಗೌರವಿಸುವ ತವಕದಲ್ಲಿ ಬಾಂಡರಿ ಕಾಯುವ ಯೋಧರನ್ನು ನಾವು ಮರೆಯಬಾರದು. 12 ಶತಮಾನದಲ್ಲಿ ಬಸವಾದಿ ಶಿವ ಶರಣರು ಮಹಿಳೆಯರಿಗೆ ಬಹು ದೊಡ್ಡ ಸ್ಥಾನವನ್ನು ಕೊಟ್ಟಿದ್ದಾರೆ. ಅದನ್ನು ಅರಿತು ನಾವು ಇಂದು ಮಹಿಳೆಯರನ್ನು ಗೌರವಿಸಿ ಅವರನ್ನು ಸಾಧಕರನ್ನಾಗಿ ಮಾಡುವ ಮಹತ್ವದ ಕಾರ್ಯಮಾಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ರವೀಂದ್ರಾ ಏನರ್ಜಿ ಲಿಮಿಟೆಡ್ ನ ಸಂಸ್ಥಾಪಕರಾದ ಶ್ರೀಮತಿ ಡಾ. ವಿದ್ಯಾ ಮರಕುಂಬಿ ಉದ್ಘಾಟಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿದ ಮಹಿಳೆಯರನ್ನು ಸತ್ಕರಿಸಿ,ಗೌರವಿಸಲಾಯಿತು.
ವೇದಿಕೆಯಲ್ಲಿ ಶ್ರೀಮತಿ ಶೋಭಾ ಗಸ್ತಿ,ಚಿಕ್ಕೋಡಿ ಪುರಸಭೆ ಅಧ್ಯಕ್ಷೆ ಶ್ರೀಮತಿ ವೀಣಾ ಕವಟಗಿಮಠ, ಶ್ರೀಮತಿ ಗೌರಿ ಮಾಂಜರೇಕರ್, ಶ್ರೀಮತಿ ಭಾರತಿ ಮರೆನ್ನವರ, ಉತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಕೊಟಗಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರುಗಳಾದ ಆರ್.ಎಲ್.ಮಿರ್ಜಿ, ಎಸ್.ಕೆ.ಮಠದ ನಿರೂಪಿಸಿ ,ವಂದಿಸಿದರು.