RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ಖಾನಾಪುರಕ್ಕೆ ತಲುಪಿದ ತೆಲಗಿ ಶವ : ಪರಸ್ಪರ ಸಂಬಂಧಿಕರ ನಡುವೆ ಗಲಾಟೆ

ಬೆಳಗಾವಿ:ಖಾನಾಪುರಕ್ಕೆ ತಲುಪಿದ ತೆಲಗಿ ಶವ : ಪರಸ್ಪರ ಸಂಬಂಧಿಕರ ನಡುವೆ ಗಲಾಟೆ 

ಖಾನಾಪುರಕ್ಕೆ ತಲುಪಿದ ತೆಲಗಿ ಶವ : ಪರಸ್ಪರ ಸಂಬಂಧಿಕರ ನಡುವೆ ಗಲಾಟೆ

ಬೆಳಗಾವಿ ಅ 28: ಬಹುಕೋಟಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲಾ ತೆಲಗಿ ಶವ ಖಾನಾಪುರ ತಲುಪಿದೆ

ಈ ಸಂದರ್ಭದಲ್ಲಿ ತೆಲಗಿ ಹೆಣದ ಮುಂದೆ ಕುಟುಂಬಸ್ಥರು ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ. ಕರೀಂಲಾಲ್ ತೆಲಗಿ ಮಗಳು ಮತ್ತು ತೆಲಗಿ ತಮ್ಮನ ನಡುವೆ ವಾಗ್ವಾದವೇ ನಡೆದಿದೆ. ‘ಆಸ್ಪತ್ರೆಯಲ್ಲಿ ಇದ್ದಾಗ ನೋಡಲು ಬಾರದ ನೀವು ಈಗ ಅಂತ್ಯಕ್ರಿಯೆಗೆ ಬಂದಿದ್ದೇಕೆ’ ಎಂದು ತೆಲಗಿ ಮಗಳು ಸನಾ, ಚಿಕ್ಕಪ್ಪನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಈ ಘಟನೆ ನಂತರ ತೆಲಗಿ ಸಹೋದರ ಮನೆಯಿಂದ ಹೊರ ಹೋಗಿದ್ದಾರೆ ಎನ್ನಲಾಗಿದೆ

ಅಷ್ಟೇ ಅಲ್ಲ ನಂತರ ಕರೀಂಲಾಲ್ ಅಳಿಯ ಇರ್ಫಾನ್ ತಾಳಿಕೋಟಿ ಮತ್ತು ಕರೀಂಲಾಲ್ ತಮ್ಮ ಅಜಿಂ ತೆಲಗಿ ಕೈ ಕೈ ಮಿಲಾಯಿಸಿದ್ದಾರೆ. ನಮ್ಮ ಮಾವ ತೊಂದರೆಯಲ್ಲಿದ್ದಾಗ ಬಾರದಿದ್ದವ್ರು ಈಗೇಕೆ ಬಂದ್ರಿ ಎಂದಿದ್ದಕ್ಕೆ ಗಲಾಟೆಯಾಗಿದೆ. ಕರೀಂಲಾಲ್ ಹೆಣವನ್ನ ನೋಡಲು ಬರಬೇಡ ಎಂದಿದ್ದಕ್ಕೆ ಹೊಡೆದಾಟ ನಡೆದಿದ್ದು, ನಂತರ ಸ್ಥಳೀಯರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿದೆ.  

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಅಬ್ದುಲ್ ಕರೀಂಲಾಲ್‌ ತೆಲಗಿಗೆ ಅನಾರೋಗ್ಯದ ಕಾರಣ ಅಕ್ಟೋಬರ್ 16 ರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತೆಲಗಿ ಗುರುವಾರ ಮಧ್ಯಾಹ್ನ ಸಾವನ್ನಪ್ಪಿದ್ದ. ಬಳಿಕ ತೆಲಗಿ ಮೃತದೇಹವನ್ನು ಹುಟ್ಟೂರು ಖಾನಾಪುಕ್ಕೆ ರವಾನೆ ಮಾಡಲಾಗಿತ್ತು.

Related posts: