RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯುದನ್ನು ಯಾರಿಂದಲು ತಪ್ಪಿಸಲು ಸಾಧ್ಯವಿಲ್ಲ : ಸಚಿವ ರಮೇಶ

ಗೋಕಾಕ:ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯುದನ್ನು ಯಾರಿಂದಲು ತಪ್ಪಿಸಲು ಸಾಧ್ಯವಿಲ್ಲ : ಸಚಿವ ರಮೇಶ 

ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯುದನ್ನು ಯಾರಿಂದಲು ತಪ್ಪಿಸಲು ಸಾಧ್ಯವಿಲ್ಲ : ಸಚಿವ ರಮೇಶ

ಗೋಕಾಕ ನ 5: ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯುದನ್ನು ಯಾರಿಂದಲು ತಪ್ಪಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು

ಅವರು, ರವಿವಾರದಂದು ನಗರದ ಕುರುಬರ ದಡ್ಡಿ ಓಣಿಯಲ್ಲಿ ನಡೆದ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು

ಕಳೆದ ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಸರಕಾರ ಬಡವರ, ದಿನ ದಲಿತರ , ಹಿಂದುಳಿದವರ ಹಾಗೂ ಅಲ್ಪಸಂಖ್ಯಾತರ ಶೇಯೊಭಿವೃದಿಗೆ ಹಲವಾರು ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ತಂದು ಅವುಗಳನ್ನು ಫಲಪ್ರಧವಾಗಿ ಅನುಷ್ಠಾನ ಗೊಳಿಸಿದೆ ಕಾಂಗ್ರೆಸ್ ಸರಕಾರದ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನಿಡಲ್ಲಿದ್ದಾರೆಂದು ಜಾರಕಿಹೊಳಿ ಹೇಳಿದರು
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಲು ಕಾರ್ಯಕರ್ತರು ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು

ಈ ಸಂದರ್ಭದಲ್ಲಿ ಗೋಕಾಕ ಮತ ಕ್ಷೇತ್ರದ ಉಸ್ತುವಾರಿ ಶಿವಾನಂದ ಪಾಚಂಗಿ , ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಉಫಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಜೀರ ಶೇಖ, ನಗರಸಭೆ ಸದಸ್ಯರಾದ ಎಸ್ ಎ ಕೋತವಾಲ, ಭೀಮಶಿ ಭರಮನ್ನವರ, ಬಾಬು ಶೇಖಬಡೆ, ಸಿದ್ದಪ್ಪ ಹುಚ್ಚರಾಯಪ್ಪಗೋಳ, ಗೀರಿಶ ಖೋತ, ಕುತುಬುದ್ದೀನ್ ಗೋಕಾಕ, ಕಾಂಗ್ರೆಸ್ ಮುಖಂಡರಾದ ಮುತ್ತುರಾಜ ಜಮಖಂಡಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಶಿವಾನಂದ ಹತ್ತಿ, ಬಸವರಾಜ ಸಾಯನ್ನವರ, ಅಬ್ಬಾಸ ದೇಸಾಯಿ ಸೇರಿದಂತೆ ಅನೇಕರು ಇದ್ದರು

Related posts: