RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಅಡುಗೆ ಸ್ಪರ್ಧೆಯಲ್ಲಿ ಶಿವಶಕ್ತಿ ನಿರಂತರ ಉಳಿತಾಯ ಗುಂಪಿಗೆ ದ್ವಿತೀಯ ಮತ್ತು ತೃತೀಯ ಸ್ಥಾನ

ಗೋಕಾಕ:ಅಡುಗೆ ಸ್ಪರ್ಧೆಯಲ್ಲಿ ಶಿವಶಕ್ತಿ ನಿರಂತರ ಉಳಿತಾಯ ಗುಂಪಿಗೆ ದ್ವಿತೀಯ ಮತ್ತು ತೃತೀಯ ಸ್ಥಾನ 

ಅಡುಗೆ ಸ್ಪರ್ಧೆಯಲ್ಲಿ ಶಿವಶಕ್ತಿ ನಿರಂತರ ಉಳಿತಾಯ ಗುಂಪಿಗೆ ದ್ವಿತೀಯ ಮತ್ತು ತೃತೀಯ ಸ್ಥಾನ

ಗೋಕಾಕ ನ 28: ತಾಲೂಕಿನ ಶಿವಶಕ್ತಿ ನಿರಂತರ ಉಳಿತಾಯ ಗುಂಪಿನ ಪ್ರತಿನಿಧಿಯಾದ ಸವಿತಾ ಬಸವರಾಜ ಪಾಟೀಲ ಹಾಗೂ ವಿಜೇತಾ ವಿಶ್ವನಾಥ ಪಾಟೀಲ ಅವರು ಬೆಳಗಾವಿಯ ಶಿವಬಸವ ನಗರದ ಡಾ. ಎಸ್.ಜಿ.ಬಾಳೆಕುಂದ್ರಿ ಇಂಜಿನಿಯರಿಂಗ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆದ ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆ ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕೃಷಿ ಇಲಾಖೆ ಆಯೋಜಿಸಿರುವ ಸಾವಯವ ಮತ್ತು ಸಿರಿಧಾನ್ಯಗಳ ಮೇಳದಲ್ಲಿ ಭಾಗವಹಿಸಿ ಕ್ರಮವಾಗಿ ಮೂರು ಅಡುಗೆ ಪದಾರ್ಥಗಳಿಗೆ ದ್ವೀತಿಯ ತೃತಿಯ ಮೂರು ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಎ .ಡಿ. ಸವದತ್ತಿಯವರ ಮಾರ್ಗದರ್ಶನದಲ್ಲಿ ಆತ್ಮ ಯೋಜನೆಯ ಸಂಘದ ಸದಸ್ಯರು ಭಾಗವಹಿಸಿ ಸಿರಿಧಾನ್ಯಗಳ ಮಾಹಿತಿ ಮತ್ತು ಅವುಗಳ ಮಹತ್ವ ಪಡೆದುಕೊಂಡರು. ಜಿಲ್ಲೆಯ 10 ತಾಲೂಕುಗಳಿಂದ ರೈತ ಮಹಿಳೆಯರು ಹಾಗೂ ಸಂಘದ ಸದಸ್ಯರು ಭಾಗವಹಿಸಿ ಹಲವಾರು ಸಿರಿಧಾನ್ಯಗಳಿಂದ ಮಾಡಿದ ಪದಾರ್ಥಗಳನ್ನು ಪ್ರದರ್ಶಿಸಿದರು.

Related posts: