RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ವಿದ್ಯಾರ್ಥಿಗಳ ಜ್ಞಾನ ಭಂಡಾರಕ್ಕೆ ಶೈಕ್ಷಣಿಕ ಪ್ರವಾಸಗಳು ಪೂರಕವಾಗಿವೆ : ಬಿಇಓ ಎ.ಸಿ. ಗಂಗಾಧರ

ಗೋಕಾಕ:ವಿದ್ಯಾರ್ಥಿಗಳ ಜ್ಞಾನ ಭಂಡಾರಕ್ಕೆ ಶೈಕ್ಷಣಿಕ ಪ್ರವಾಸಗಳು ಪೂರಕವಾಗಿವೆ : ಬಿಇಓ ಎ.ಸಿ. ಗಂಗಾಧರ 

ವಿದ್ಯಾರ್ಥಿಗಳ ಜ್ಞಾನ ಭಂಡಾರಕ್ಕೆ ಶೈಕ್ಷಣಿಕ ಪ್ರವಾಸಗಳು ಪೂರಕವಾಗಿವೆ : ಬಿಇಓ ಎ.ಸಿ. ಗಂಗಾಧರ

ಗೋಕಾಕ ಡಿ 7: ಮೂಡಲಗಿ ವಲಯದ ಸರ್ಕಾರಿ ಪ್ರೌಢ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಇಲ್ಲಿನ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಚಾಲನೆ ನೀಡಲಾಯಿತು.
ಮೂಡಲಗಿ ವಲಯದ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ ಅವರು ವಿದ್ಯಾರ್ಥಿಗಳ ಜ್ಞಾನ ಭಂಡಾರಕ್ಕೆ ಇಂತಹ ಶೈಕ್ಷಣಿಕ ಪ್ರವಾಸಗಳು ಪೂರಕವಾಗಿವೆ. ವಿದ್ಯಾರ್ಥಿಗಳು ಪ್ರವಾಸದ ಸಂದರ್ಭದಲ್ಲಿ ಪ್ರೇಕ್ಷಣಿಯ ಸ್ಥಳಗಳ ಇತಿಹಾಸ ಅರಿಯಬೇಕು. ಇದರಿಂದ ಜ್ಞಾನ ಬಲವರ್ಧನೆಗೊಳ್ಳುತ್ತದೆ. ಡಿ.7 ರಿಂದ 11 ರವರೆಗೆ ಈ ಶೈಕ್ಷಣಿಕ ಪ್ರವಾಸ ಜರುಗಲಿದ್ದು ಒಟ್ಟು 150 ವಿದ್ಯಾರ್ಥಿಗಳು ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ನೆರವನ್ನು ಒದಗಿಸಿದ್ದಾರೆ. ಮೂಡಲಗಿ ಶೈಕ್ಷಣಿಕ ವಲಯದ ಎಲ್ಲ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳ ಪರವಾಗಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಡಿ.7 ರಂದು ಗೋಕಾಕದಿಂದ ಸವದತ್ತಿ, ಧಾರವಾಡ, ಹುಬ್ಬಳ್ಳಿ, ಮುಂಡಗೋಡ, ಶಿರಸಿ(ವಾಸ್ತವ್ಯ), ಡಿ.8 ರಂದು ಶಿರಸಿಯಿಂದ ಜೋಗ ಫಾಲ್ಸ್, ಇಡಗುಂಜಿ, ಮುರ್ಡೇಶ್ವರ, ಕೊಲ್ಲೂರ, ಉಡುಪಿ(ವಾಸ್ತವ್ಯ), ಡಿ.9 ರಂದು ಉಡುಪಿಯಿಂದ ಮಣಿಪಾಲ, ಕಾರ್ಕಳ, ಮೂಡಬಿದರೆ, ಧರ್ಮಸ್ಥಳ(ವಾಸ್ತವ್ಯ), ಡಿ.10 ರಂದು ಧರ್ಮಸ್ಥಳದಿಂದ ಹೊರನಾಡು, ಶೃಂಗೇರಿ, ಶಿವಮೊಗ್ಗ ಹಾಗೂ ಡಿ.11 ರಂದು ಶಿವಮೊಗ್ಗದಿಂದ ಶಿಗ್ಗಾಂವ, ಗೋಕಾಕ ಮಾರ್ಗವಾಗಿ ಮೂಡಲಗಿಗೆ ನಿರ್ಗಮಿಸಲಿದೆ ಎಂದು ಶೈಕ್ಷಣಿಕ ಪ್ರವಾಸದ ಮಾಹಿತಿಯನ್ನು ಗಂಗಾಧರ ನೀಡಿದರು.
ಬಸವಂತ ಕಮತಿ, ಸುಧೀರ ಜೋಡಟ್ಟಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ದೈಹಿಕ ಶಿಕ್ಷಣಾಧಿಕಾರಿ ಎಸ್.ಎ. ನಾಡಗೌಡ, ಲಕ್ಕಪ್ಪ ಲೋಕುರಿ, ಸರ್ಕಾರಿ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರುಗಳು, ಪಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
150 ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ವಾ.ಕ.ರ.ಸಾ.ಸಂಸ್ಥೆಯ 3 ಬಸ್ಸುಗಳನ್ನು ಕಲ್ಪಿಸಲಾಗಿದೆ.

Related posts: