ಗೋಕಾಕ:ಈಶ್ವರ ಮಮದಾಪೂರಗೆ ಸತ್ಕಾರ
ಈಶ್ವರ ಮಮದಾಪೂರಗೆ ಸತ್ಕಾರ
ಗೋಕಾಕ ಡಿ 28 : ತುಮಕೂರಿನಲ್ಲಿ ಇತ್ತೀಚೆಗೆ ಹನಿ ಹನಿ ಇಬ್ಬನಿ ಸಾಹಿತ್ಯ ಬಳಗದ ವತಿಯಿಂದ ನಡೆದ ರಾಜ್ಯ ಮಟ್ಟದ ಕವಿಗೋಷ್ಟಿ ಹಾಗೂ ಕವನ ಸಂಕಲನಗಳ ಬಿಡುಗಡೆ ಸಮಾರಂಭದಲ್ಲಿ ಗೋಕಾಕ ಸಿರಿಗನ್ನಡ ವೇದಿಕೆ ತಾಲೂಕ ಸಿರಿಗನ್ನಡ ವೇದಿಕೆ ಅಧ್ಯಕ್ಷರಾದ ಈಶ್ವರ ಮಮದಾಪೂರ ಇವರನ್ನು ಸತ್ಕರಿಸಿ ಗೌರವಿಸಲಾಯಿತು.
ಸಾಹಿತ್ಯಿಕ ಹಾಗೂ ಸಂಘಟನಾ ಕ್ಷೇತ್ರದಲ್ಲಿಯ ಸಾಧನೆಯನ್ನು ಪರಿಗಣಿಸಿ ವೇದಿಕೆಯ ಅಧ್ಯಕ್ಷರಾದ ಖುಷಿ ಕೃಷ್ಣ, ಉಪಾಧ್ಯಕ್ಷ ನಿಟ್ಟೂರು ಚಂದ್ರು ಹಾಗೂ ಸಂಘಟನೆ ಸದಸ್ಯರು ಗೌರವಿಸಿ ಸತ್ಕರಿಸಿದರು.