RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ದೇಶವನ್ನು ಆಳುವ ರಾಜಕೀಯ ಮನಸುಗಳು ಬದಲಾಗಬೇಕು: ಪ.ಪೂ ಶ್ರೀ ನಿಜಗುಣಪ್ರಭು

ಗೋಕಾಕ:ದೇಶವನ್ನು ಆಳುವ ರಾಜಕೀಯ ಮನಸುಗಳು ಬದಲಾಗಬೇಕು: ಪ.ಪೂ ಶ್ರೀ ನಿಜಗುಣಪ್ರಭು 

ದೇಶವನ್ನು ಆಳುವ ರಾಜಕೀಯ ಮನಸುಗಳು ಬದಲಾಗಬೇಕು: ಪ.ಪೂ ಶ್ರೀ ನಿಜಗುಣಪ್ರಭು

ಗೋಕಾಕ ಫೆ 4 : ಭಾರತ ಬಲಿಷ್ಠ ಆಗಬೇಕಾದರೆ ದೇಶವನ್ನು ಆಳುವ ರಾಜಕೀಯ ಮನಸುಗಳು ಬದಲಾಗಬೇಕು ಎಂದು ಮುಂಡರಗಿ-ಬೈಲೂರು ಶಾಖಾ ಮಠದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಹೇಳಿದರು

ಅವರು ಶನಿವಾರ ರಾತ್ರಿ ಇಲ್ಲಿಯ ಶೂನ್ಯ ಸಂಪಾದನ ಮಠದಿಂದ ಜರುಗುತ್ತಿರುವ ಕಾಯಕಯೋಗಿ ಲಿಂ.ಬಸವ ಮಹಾಸ್ವಾಮಿಗಳ 13ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಶರಣ ಸಂಸ್ಕಂತಿ ಉತ್ಸವ ಕಾರ್ಯಕ್ರಮದ ಮೂರನೇ ದಿನದ ಸೈನಿಕ ಗೋಷ್ಠಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು

ಕಾರ್ಯಕ್ರಮವನ್ನು ಉದ್ದೇಸಿಸಿ ಮಾತನಾಡುತ್ತಿರುವ ಪರಮ ಪೂಜ್ಯ ನಿಜಗುಣಪ್ರಭು

ಸ್ವರ್ವ ಜಾತಿ, ಜನಾಂಗೀಯ ಜನರು ರಾಷ್ಟ್ರ ಭಕ್ತಿಯಿಂದ ಬದುಕಿದರೆ ದೇಶದಲ್ಲಿ ಯಾವುದೆ ಗದ್ದಲಗಳು ಆಗುವುದಿಲ್ಲಾ ಇದಕ್ಕೆ ರಾಷ್ಟ್ರಧರ್ಮದ ತಳಹದಿ ಮೇಲೆ ದೇಶವನ್ನು ಕಾಪಾಡುತ್ತಿರುವ ಸೈನಿಕರು ನಮ್ಮಗೆ ಆರ್ದಶ

ಧರ್ಮದ ತಳಹದಿ ಮೇಲೆ ರಾಜಕೀಯ , ಅಧಿಕಾರ ಗಿಟ್ಟಿಸಿ ದೇವಸ್ಥಾನ, ಮಂದಿರ,ಮಸೀದಿಗಳು ಕಟ್ಟಬಹುದು ಆದರೇ ದೇಶ ಕಟ್ಟಲು ಸಾಧ್ಯವಿಲ್ಲ ದೇಶವನ್ನು ಮಾನವೀಯ ಮೌಲ್ಯಗಳಿಂದ ಮಾತ್ರ ಕಟ್ಟಲು ಸಾಧ್ಯ .

ಬುದ್ಧ, ಬಸವಣ್ಣ, ಜೋತಿಭಾಪೂಲೇ ಮಹಾವೀರ , ವಿವೇಕಾನಂದ, ಅಂಬೇಡ್ಕರ್ ರಂತಹ ಅನೇಕ ಸತ್ತಪುರಷರ ಚಿಂತನೆ ಮೇಲೆ ಭಾರತ ನಿಂತಿದೆ ಹೋರೆತು ವ್ಯವಸ್ಥೆಗಳ ತಿಕ್ಕಾಟದ ಮೇಲಲ್ಲಾ

ಭಾರತ ದೇಶಕ್ಕೆ ಸೂಮಾರು 5 ಸಾವಿರ ವರ್ಷಗಳ ಇತಿಹಾಸವಿದೆ ರಾಮ,ರಹೀಮ , ಮಸೀದಿ , ಗುಡಿ, ಚರ್ಚ್ ನಂತರ ಮೊದಲು ಮಾನವನಿಗೆ ಬದುಕಲು ಅನ್ನ , ಜಾಷಧಿ , ಅರಿವು , ಅರಿವೆ , ಆಶ್ರಯಬೇಕು ಈ ದೇಶ ಉಳಿಯಬೇಕೆಂದರೆ ಭಾವೈಕ್ಯೆತೆ ಸಾರುವ ಹೃದಯಗಳುಬೇಕು ಎಂದು ಪರಮ ಪೂಜ್ಯ ನಿಜಗುಣಪ್ರಭು ಹೇಳಿದರು

ಕಾರ್ಯಕ್ರಮದ ನೇತೃತ್ವವನ್ನು ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಅತಿಥಿಗಳಾಗಿ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ,
ಖ್ಯಾತ ಎಲುಬು ಕೀಲು ತಜ್ಞ ಡಾ.ಎಂ.ಜಿ. ಉಮರಾಣಿ, ಈರಣ್ಣಗೌಡ ಹಾದಿಮನಿ, ಉಳವಪ್ಪ ಮಠದ, ರವಿಚಂದ್ರ ಮಾರಿಹಾಳ, ಬಸವರಾಜ ಪಾಟೀಲ, ಮಹಾಲಿಂಗ ಗುಣದಾಳಿ, ಮಲ್ಲಿಕಾರ್ಜುನ ಹೆಗ್ಗನ್ನವರ, ಮಲ್ಲಿಕಾರ್ಜುನ ಈಟಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವೀರಮರಣ ಹೊಂದಿದ ಯೋಧರ ತಾಯಿಯವರಾದ ಬೆಟದೂರಿನ ಬಸವ್ವಾ ರಾಮಪ್ಪಾ ಕೊಪ್ಪದ ಮತ್ತು ನಬಾಪೂರದ ದುಂಡವ್ವಾ ಚನ್ನಪ್ಪ ಪಾಟೀಲ ಅವರಿಗೆ ಸ್ವಾಮೀಜಿಗಳಿಂದ ತುಲಾಭಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈಯುತ್ತಿರುವ ಸಾಧಕರನ್ನು ಗೌರವಿಸಿ ಸತ್ಕರಿಸಲಾಯಿತು

ಕಾರ್ಯಕ್ರಮವನ್ನು ಶಿಕ್ಷಣ ಮಿರ್ಜಿ ನಿರೂಪಿಸಿ ವಂದಿಸಿದರು

Related posts: