ಖಾನಾಪುರ : ಪ್ರಪಾತಕ್ಕೆ ಬಿದ್ದು ಅಧಿಕಾರಿ ಸಾವು : ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಘಟನೆ
ಪ್ರಪಾತಕ್ಕೆ ಬಿದ್ದು ಅಧಿಕಾರಿ ಸಾವು : ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಘಟನೆ
ಖಾನಾಪುರ ಮೇ 24: ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದಲ್ಲಿ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದು ಅಧಿಕಾರಿ ಒಬ್ಬರು ಸಾವಿಗಿಡಾದ ಘಟನೆ ಮಂಗಳವಾರ ಸಂಭವಿಸಿದೆ
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಚೊರ್ಲಾ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಎಮ್.ಎಫ್. ನಾರಾಯಣ್ಕರ್ ಮೃತ ಅಧಿಕಾರಿ ಎಂದು ತಿಳಿದಿದೆ ಇವರು ರಾಜ್ಯದ ಆರ್ಡಿಪಿಆರ್ ತಂಡದೊಂದಿಗೆ ಬೆಳಗಾವಿ ಮತ್ತು ಗೋವಾ ಗಡಿ ಗುರುತಿಸುವ ಕಾರ್ಯಕ್ಕೆ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.
ಗಡಿ ಗುರುತಿಸುವಾಗ ಆಕಸ್ಮಿಕವಾಗಿ ಜಾರಿದ ಹಿರಿಯ ಅಧಿಕಾರಿಯನ್ನು ರಕ್ಷಿಸಲು ಹೋದ ನಾರಾಯಣ್ಕರ್, ಡೆಲ್ಟಾ ಪ್ರಪಾತಕ್ಕೆ ಬಿದ್ದು ದುರಂತ ಸಾವಿಗೀಡಾಗಿದ್ದಾರೆ. ನಾರಾಯಣ್ಕರ್ ಶವಕ್ಕಾಗಿ ಗೋವಾ ಗಡಿಯ ಘಾಟ್ನಲ್ಲಿ ಗೋವಾ ಪೋಲಿಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ಬಗ್ಗೆ ಗೋವಾದ ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.