RNI NO. KARKAN/2006/27779|Sunday, October 20, 2024
You are here: Home » breaking news » ಚಿಕ್ಕೋಡಿ :ಅಮಿತ ಘಾಟಗೆ ಅವರನ್ನು ಆಯ್ಕೆ ಮಾಡುವ ಮೂಲಕ ಸಿದ್ದರಾಮಯ್ಯ ನವರ ಕೈ ಬಲ ಪಡಿಸಿ : ಸತೀಶ ಜಾರಕಿಹೊಳಿ

ಚಿಕ್ಕೋಡಿ :ಅಮಿತ ಘಾಟಗೆ ಅವರನ್ನು ಆಯ್ಕೆ ಮಾಡುವ ಮೂಲಕ ಸಿದ್ದರಾಮಯ್ಯ ನವರ ಕೈ ಬಲ ಪಡಿಸಿ : ಸತೀಶ ಜಾರಕಿಹೊಳಿ 

ಅಮಿತ ಘಾಟಗೆ ಅವರನ್ನು ಆಯ್ಕೆ ಮಾಡುವ ಮೂಲಕ ಸಿದ್ದರಾಮಯ್ಯ ನವರ ಕೈ ಬಲ ಪಡಿಸಿ : ಸತೀಶ ಜಾರಕಿಹೊಳಿ

ಚಿಕ್ಕೋಡಿ ಮೇ 4 : ಕೋಮುವಾದಿ ಪಕ್ಷಕ್ಕೆ ಸೇರಿದ ಪಿ.ರಾಜೀವ ಅವರಿಗೆ ಬೆಂಬಲಿಸದೆ ಕುಡಚಿ ಕಾಂಗ್ರೆಸ್ ಅಭ್ಯರ್ಥಿ ಅಮಿತ ಘಾಟಗೆ ಅವರನ್ನು ಆಯ್ಕೆ ಮಾಡುವ ಮೂಲಕ ಸಿದ್ದರಾಮಯ್ಯ ನವರ ಕೈ ಬಲ ಪಡಿಸಬೇಕೆಂದು ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಹೇಳಿದರು

ಅವರು ಕುಡಚಿ ಮತಕ್ಷೇತ್ರದಲ್ಲಿ ಕಾಂಗ್ರೇಸ ಅಭ್ಯರ್ಥಿ ಅಮಿತ ಘಾಟಕೆ ಪರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಬಾಗವಹಿಸಿ ಮಾತನಾಡಿದರು

ಕಾಂಗ್ರೇಸ ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕ್ಕೆ ಅನುಕೂವವಾಗಲು ವಿದ್ಯಾರ್ಥಿ ವೇತನ ನೀಡಿ ದೇಶದಲ್ಲಿಯೇ ಯಾವ ಸರಕಾರ ಮಾಡದ ಕಾರ್ಯ ಮಾಡಿದೆ . ಸಿದ್ದರಾಮಯ್ಯ ನೇತೃತ್ವದ ಎಲ್ಲ ಜನಪರ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಮೇ 12 ರಂದು ಜರಗುವ ಚುನಾವಣೆಯಲ್ಲಿ ಅಮಿತ ಘಾಟಗೆ ಅವರನ್ನು ಗೆಲ್ಲಿಸುವ ಮೂಲಕ ಮತ್ತೋಮ್ಮೆ ಸಿದ್ದರಾಮಯ್ಯ ನವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಸತೀಶ ವಿನಂತಿಸಿದರು

ಕಿರಿಯ ವಯಸ್ಸಿನ ಅಮಿತನನ್ನು ವಿಧಾನಸಭೆ ಕಳುಹಿಸಿ ಇತಿಹಾಸ ನಿರ್ಮಿಸಿ : ರಾಜ್ಯದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಅಭ್ಯರ್ಥಿಯಾಗಿರುವ ಅಮಿತ ಘಾಟಗೆ ಅವರನ್ನು ವಿಧಾನಸಭೆಗೆ ಕಳಿಸುವ ಮೂಲಕ ಕುಡಚಿ ಕ್ಷೇತ್ರ ಇತಿಹಾಸ ನಿರ್ಮಿಸಬೇಕು ಆ ದಿಸೆಯಲ್ಲಿ ಎಲ್ಲ ಮತದಾರ ಬಾಂಧವರು ಶ್ರಮಿಸಬೇಕೆಂದು ಸತೀಶ ಜಾರಕಿಹೊಳಿ ಅವರು ಮತದಾರರಲ್ಲಿ ವಿನಂತಿಸಿದರು

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ , ಕುಡಚಿ ಕಾಂಗ್ರೇಸ ಅಭ್ಯರ್ಥಿ ಅಮಿತ ಘಾಟಗೆ , ಶಾಮ ಘಾಟಗೆ , ಸುಭಾಸ ಬಾನೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: