RNI NO. KARKAN/2006/27779|Monday, September 16, 2024
You are here: Home » breaking news » ಗೋಕಾಕ:ಮತ್ತೋಮ್ಮೆ ಸಹೋದರ ರಮೇಶ ಶಾಸಕರಾಗಿ ಹಾಗೂ ಸಚಿವರಾಗಿ ಆಯ್ಕೆಯಾಗಲಿದ್ದಾರೆ : ಲಖನ ಜಾರಕಿಹೊಳಿ ವಿಸ್ವಾಸ

ಗೋಕಾಕ:ಮತ್ತೋಮ್ಮೆ ಸಹೋದರ ರಮೇಶ ಶಾಸಕರಾಗಿ ಹಾಗೂ ಸಚಿವರಾಗಿ ಆಯ್ಕೆಯಾಗಲಿದ್ದಾರೆ : ಲಖನ ಜಾರಕಿಹೊಳಿ ವಿಸ್ವಾಸ 

ನಗರದ ಉಪ್ಪಾರ ಗಲ್ಲಿಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಪರ ಮತಯಾಚಿಸಿ ಕಾಂಗ್ರೇಸ್ ಧುರೀಣ ಲಖನ ಜಾರಕಿಹೊಳಿ ಮಾತನಾಡುತ್ತಿರುವುದು.

ಮತ್ತೋಮ್ಮೆ ಸಹೋದರ ರಮೇಶ ಶಾಸಕರಾಗಿ ಹಾಗೂ ಸಚಿವರಾಗಿ ಆಯ್ಕೆಯಾಗಲಿದ್ದಾರೆ : ಲಖನ ಜಾರಕಿಹೊಳಿ ವಿಸ್ವಾಸ

ಗೋಕಾಕ ಮೇ 9 : ದೇವರ, ತಂದೆ-ತಾಯಿಗಳ ಹಾಗೂ ಇಲ್ಲಿಯ ಜನತೆಯ ಆಶೀರ್ವಾದದಿಂದ ಮತ್ತೋಮ್ಮೆ ಸಹೋದರ ರಮೇಶ ಜಾರಕಿಹೊಳಿ ಅವರು ಶಾಸಕರಾಗಿ ಹಾಗೂ ಸಚಿವರಾಗಿ ಆಯ್ಕೆಯಾಗಲಿದ್ದಾರೆಂದು ಕಾಂಗ್ರೇಸ್ ಧುರೀಣ ಲಖನ ಜಾರಕಿಹೊಳಿ ಹೇಳಿದರು.
ಬುಧವಾರದಂದು ಸಂಜೆ ನಗರದ ಉಪ್ಪಾರ ಗಲ್ಲಿಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಪರ ಮತಯಾಚಿಸಿ ಮಾತನಾಡಿದ ಅವರು, ಇಲ್ಲಿಯ ಜನತೆಯ ಪರಿಶ್ರಮ ಹಾಗೂ ಆಶೀರ್ವಾದಿಂದ ಸಹೋದರ ರಮೇಶ ಅವರು ಸತತವಾಗಿ 4ಬಾರಿ ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿ ನಿಮ್ಮೆಲ್ಲರ ಸೇವೆಯನ್ನು ಮಾಡಿದ್ದಾರೆ. ಈ ಬಾರಿ ಅವರಿಗೆ ಆಶೀರ್ವದಿಸಬೇಕೆಂದು ವಿನಂತಿಸಿದರು.
ಯಾವುದೇ ಒಂದು ಕಪ್ಪುಚುಕ್ಕೆ ಇಲ್ಲದೇ 5ವರ್ಷಗಳ ಕಾಲ ಆಡಳಿತ ನಡೆಸಿದ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೇಸ್ ಸರ್ಕಾರ ಮತ್ತೋಮ್ಮೆ ಅಧಿಕಾರ ಬರುದಲ್ಲದೇ ಸಹೋದರ ರಮೇಶ ಅವರು ಮತ್ತೆ ಸಚಿವರಾಗುವುದು ಶತಸಿದ್ದ ಎಂದು ಹೇಳಿದರಲ್ಲದೇ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಾ ಜನತೆಯನ್ನು ಮರಳು ಮಾಡಲು ತವಕಿಸುತ್ತಿರುವ ವಿರೋಧಿಗಳು ಮೇ-15 ರಂದು ಬರುವ ಚುನಾವಣೆಯ ಪಲಿತಾಂಶ ನೋಡಿ ಗೂಡು ಸೇರುವುದು ಖಚಿತ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಪಿಎಮ್‍ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ನಗರ ಸಭೆ ಸದಸ್ಯರಾದ ಸುರೇಶ ಬಡೆಪ್ಪಗೋಳ, ಭಗವಂತ ಹುಳ್ಳಿ, ಮುಖಂಡರಾದ ಮಾರುತಿ ಜಡಿನವರ, ಕರೆಪ್ಪ ಬಡೆಪ್ಪಗೋಳ, ಕಲ್ಲೋಳೆಪ್ಪ ತಾಶೀಲದಾರ, ಲಕ್ಷ್ಮಣ ಬಬಲಿ, ವಾಯ್.ಎಲ್.ಹೆಜ್ಜೆಗಾರ, ಎಮ್.ಎ.ತಾಶೀಲದಾರ, ವಿಠ್ಠಲ ಧರೆನ್ನವರ, ಬಾಳೇಶ ಗೋಸಬಾಳ, ಗಣಪತಿ ತಾಶೀಲದಾರ, ಗಣಪತಿ ಜಾಧವ, ನಾಗರಾಜ ತಾಶೀಲದಾರ, ನಿಂಗಪ್ಪ ಹುಳ್ಳಿ, ಸತ್ತೆಪ್ಪ ಬಡೆಪ್ಪಗೋಳ, ಸಂಜು ಜಡಿನವರ ಸೇರಿದಂತೆ ಅನೇಕರು ಇದ್ದರು.

Related posts: