ಗೋಕಾಕ:ಜಾರಕಿಹೊಳಿ ಹೊಳೆಯಲ್ಲಿ ಕೊಚ್ಚಿ ಹೋದ ಅಥಣಿಯ ಲಕ್ಷ್ಮಣ ಸವದಿ
ಜಾರಕಿಹೊಳಿ ಹೊಳೆಯಲ್ಲಿ ಕೊಚ್ಚಿ ಹೋದ ಅಥಣಿಯ ಲಕ್ಷ್ಮಣ ಸವದಿ
ವಿಶೇಷ ವರದಿ:
ಗೋಕಾಕ ಮೇ 16 : ಜಿಲ್ಲೆಯ ಪ್ರಭಾವಿ ನಾಯಕ ಎಂದೇ ಖ್ಯಾತಿ ಪಡೆದಿದ್ದ ಅಥಣಿಯ ಲಕ್ಷ್ಮಣ ಸವದಿ ಚುನಾವಣೆಯಲ್ಲಿ ಸೋಲುಂಡು ಮನೆ ಸೇರಿದ್ದಾರೆ . ಇದು ಈಗ ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ
ಚುನಾವಣೆ ಪ್ರಾರಂಭಕ್ಕೂ ಮೊದಲು ಸವದಿ ಅವರನ್ನು ಮನೆ ಹಾದಿ ಹಿಡಿಸುತ್ತೆನೆಂದು ಅಬ್ಬರದ ಪ್ರಚಾರ ಕೈಗೊಂಡು ತನ್ನ ಸ್ವ-ಕ್ಷೇತ್ರಗಿಂತ ಹೆಚ್ಚು ಅಥಣಿಯಲ್ಲಿ ಪ್ರಚಾರ ನಡೆಸಿ ತಮ್ಮ ಚಾಣಾಕ್ಷ ನಡೆಯಿಂದ ಸವದಿಗೆ ಸೋಲುನಿಸಿದ ಮಾಜಿ ಸಚಿವ ಜಿಲ್ಲೆಯ ಹಿರಿಯ ರಾಜಕಾರಣಿ ಗೋಕಾಕಿನ ರಮೇಶ ಜಾರಕಿಹೊಳಿ ತಮ್ಮ ಅಥಣಿಯಲ್ಲಿ ತಮ್ಮ ಹಿಡಿತ ಸಾಧಿಸಿ ಸವದಿಗೆ ಫಂಡರಪೂರದ ಹಾದಿ ತೋರಿಸಿದ್ದಾರೆ
ಗೋಕಾಕದವರ ಆಟ ಇಲ್ಲಿ ನಡೆಯುವದಿಲ್ಲ ಎಂದು ಬೀಗಿದ್ದ ಮಾಜಿ ಸಚಿವ ಸವದಿಗೆ ಜಾರಕಿಹೊಳಿ ಫವರ ಎಂತಹದ್ದು ಎಂದು ತಿಳಿದಿದೆ .ಶತಾಯಗತಾಯ ಅಥಣಿ ತಾಲೂಕಿನ ಮೇಲೆ ತಮ್ಮ ಹಿಡಿದ ಸಾಧಿಸಲು ಪಣ ತೋಟ್ಟಿದ ರಮೇಶ ಜಾರಕಿಹೊಳಿ ಅವರು ಅಥಣಿಯಲ್ಲಿ ಮಹೇಶ ಕುಮ್ಮಟೋಳ್ಳಿ ಮತ್ತು ಕಾಗವಾಡದಲ್ಲಿ ಶ್ರೀಮಂತ ಪಾಟೀಲ ಅವರನ್ನು ಗೆಲ್ಲುಸುವ ಮೂಲಕ ತಮ್ಮ ಹಠವನ್ನು ಸಾಧಿಸಿ ತೋರಿಸಿದ್ದಾರೆ
ಇದರಿಂದ ಜಾರಕಿಹೊಳಿ ಅವರ ಹೊಳೆಯಲ್ಲಿ ಅಥಣಿ ತಾಲೂಕಿನ ಘಟಾನುಘಟ್ಟಿ ನಾಯಕರೆಂದು ಬೀಗುತ್ತಿದ್ದ ಲಕ್ಷ್ಮಣ ಸವದಿ ಮತ್ತು ರಾಜು ಕಾಗೆ ಅವರು ಬರುವ 5 ವರ್ಷಗಳ ಕಾಲ ಗೂಡು ಸೇರಿದ್ದಾರೆ