ಗೋಕಾಕ:ನಗರ ಸಭೆ ಸದಸ್ಯ ಬಸವರಾಜ ಮುಳಗುಂದ ನಿಧನ
ನಗರ ಸಭೆ ಸದಸ್ಯ ಬಸವರಾಜ ಮುಳಗುಂದ ನಿಧನ
ಗೋಕಾಕ ಮೇ 26 : ನಗರದ ಶಿಂಧಿಗಾರ ಗಲ್ಲಿಯ ನಿವಾಸಿ ಆರ್ಯ-ಈಡಿಗ ಸಮಾಜದ ಮುಖಂಡ ಹಾಗೂ ನಗರ ಸಭೆಯ ಸದಸ್ಯ ಬಸವರಾಜ ಕೃಷ್ಣಪ್ಪ ಮುಳಗುಂದ(52) ಶನಿವಾರದಂದು ಮಧ್ಯಾಹ್ನ ಹೃದಯಘಾತದಿಂದ ನಿಧನರಾದರು.
ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಅಂತ್ಯಕ್ರೀಯೆಯು ನಗರದ ಸಾರ್ವಜನಿಕ ಸಶ್ಮಾನದಲ್ಲಿ ದಿ. 27 ರಂದು ಮುಂಜಾನೆ 9 ಗಂಟೆಗೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.