RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ :ಗೋಕಾಕಿನಲ್ಲಿ ರಮಜಾನ ಹಬ್ಬದ ಸಂಭ್ರಮ : ಪರಸ್ಪರ ಹಬ್ಬದ ಶುಭಾಶಯಗಳ ಕೋರಿದ ಮುಸ್ಲಿಂ ಬಾಂಧವರು

ಗೋಕಾಕ :ಗೋಕಾಕಿನಲ್ಲಿ ರಮಜಾನ ಹಬ್ಬದ ಸಂಭ್ರಮ : ಪರಸ್ಪರ ಹಬ್ಬದ ಶುಭಾಶಯಗಳ ಕೋರಿದ ಮುಸ್ಲಿಂ ಬಾಂಧವರು 

ರಮಜಾನ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿರುವ ಬಾಂಧವರು

ಗೋಕಾಕಿನಲ್ಲಿ ರಮಜಾನ ಹಬ್ಬದ ಸಂಭ್ರಮ : ಪರಸ್ಪರ ಹಬ್ಬದ ಶುಭಾಶಯಗಳ ಕೋರಿದ ಮುಸ್ಲಿಂ ಬಾಂಧವರು

ಗೋಕಾಕ ಜೂ 16 : ಬೆಳಗಾವಿ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರದಂದು ಮುಸ್ಲಿಂ ಭಾಂಧವರು ಸೇರಿ ಈದ್ ಉಲ್ ಫಿತರ್ ಆಚರಿಸಿದರು

ಸ್ನೇಹ , ಸ್ನೇಹ ಸೌಹಾರ್ದತೆಯ ತ್ಯಾಗದ ಸಂಕೇತವಾಗಿರುವ ರಮಜಾನ ಹಬ್ಬವನ್ನು ಗೋಕಾಕನಲ್ಲಿಯೂ ಸಹ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು

ನಗರದ ಈದ್ಗಾ ಮೈದಾನ ಸೇರಿದಂತೆ ವಿವಿಧ ಮಸೀದಿಗಳಲ್ಲಿ ಇಂದು ಬೆಳಗ್ಗೆಯೇ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ನೆರವೇರಿತು

 

 

ಲಕ್ಷಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ನಗರದ ಈದಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು ಸಾಮೂಹಿಕ ಪ್ರಾರ್ಥನೆಯಲ್ಲಿ ಹಾಜಿ ಬಸ್ಸಪುರ (ಅಮೀರಸಾಬ) ಅವರು ರಮಜಾನ ಹಬ್ಬದ ಸಂದೇಶ ನೀಡಿದರು ಸ್ನೇಹ ಸೌಹಾರ್ದತೆ , ತ್ಯಾಗದ ಸಂಕೇತವಾಗಿರುವ ರಮಜಾನ ಹಬ್ಬವನ್ನು ಅಲ್ಹಾನ ಆಜ್ಞೆಯಂತೆ ಆಚರಿಸಬೇಕು ಪ್ರೀತಿ ಸಹಬಾಳ್ವೆಯಿಂದ ಒಬ್ಬ ಉತ್ತಮ ಮಾನವನಾಗಿ ಧಾರ್ಮಿಕ ಕರ್ತವ್ಯಗಳನ್ನು ನಿಭಾಯಿಸಬೇಕು ಎಂದು ಸಂದೇಶ ನೀಡಿದರು

ಹೊಸ ಬಟ್ಟೆ ತೊಟ್ಟುಕೊಂಡ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಸಂಭ್ರಮವನ್ನು ಶುಭಾಶಯಗಳ ಮೂಲಕ ಹಂಚಿ ಸಂಭ್ರಮಿಸಿದರು

ಈದ್ಗಾ ಮೈದಾನದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ನಗರಸಭೆ ಹಿರಿಯ ಸದಸ್ಯ ಎಸ್.ಎ.ಕೋತವಾಲ , ಅಬ್ದುಲರಹೇಮಾನ ದೇಸಾಯಿ, ಹಾಜಿ ನಜೀರಅಹ್ಮದ್ ಶೇಖ , ಹಾಜಿ ಕುತಬುದ್ದೀನ ಗೋಕಾಕ, ಹಾಜಿ ಇಲ್ಲಾಹಿ ಖೈರದಿ , ಮಲಿಕ್ ಪೈಲವಾನ , ಡಿ.ಯು.ಅತ್ತಾರ , ಮಧ್ಯಾಹ್ನ ಬಿಸಿಯೂಟ ಅಧಿಕಾರಿ ಜಿ.ಬಿ.ಬಳಗಾರ ,ಎಂ.ಡಿ.ಮುಜಾವರ , ಅಬ್ಬಾಸ ದೇಸಾಯಿ , ಸಾದಿಕ ಹಲ್ಯಾಳ , ಸೇರಿದಂತೆ ಸಾವಿರಾರು ಜನ ಉಪಸ್ಥಿತರಿದ್ದು ದೇವರ ಕರುಣೆಗೆ ಪಾತ್ರರಾದರು
ಇದೇ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ , ಬಿಜಿಪಿ ಮುಖಂಡ ಅಶೋಕ ಪೂಜೇರಿ ಡಿವಾಯ್ಎಸಪಿ ಪ್ರಭು ಡಿ.ಟಿ , ಸೇರಿದಂತೆ ಅನೇಕ ಗಣ್ಯರು ಮುಸ್ಲೀಂ ಬಾಂಧವರಿಗೆ ರಮಜಾನ ಹಬ್ಬದ ಶುಭಾಶಯ ಕೋರಿದರು

Related posts: