ಗೋಕಾಕ:ಸೃಜನಶೀಲ ಕನ್ನಡ ಸಾಹಿತ್ಯ ಮಹಿಳಾ ಬಳಗಕ್ಕೆ ನೇಮಕ
ಸೃಜನಶೀಲ ಕನ್ನಡ ಸಾಹಿತ್ಯ ಮಹಿಳಾ ಬಳಗಕ್ಕೆ ನೇಮಕ
ಗೋಕಾಕ ಜೂ 19 : ಸೃಜನಶೀಲ ಕನ್ನಡ ಸಾಹಿತ್ಯ ಮಹಿಳಾ ಬಳಗ ಗೋಕಾಕ ಘಟಕದ ಗೌರವಾಧ್ಯಕ್ಷ, ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ರಾಜ್ಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ರಾಜ್ಯಾಧ್ಯಕ್ಷ ಶ್ರೀಧರ ಆಸಂಗಿಹಾಳ ಅವರು ನೇಮಕ ಮಾಡಿದ್ದಾರೆ.
ಗೌರವಾಧ್ಯಕ್ಷರಾಗಿ ಪುಷ್ಪಾ ಮುರಗೋಡ, ಅಧ್ಯಕ್ಷರಾಗಿ ಮಹಾನಂದಾ ಪಾಟೀಲ, ಉಪಾಧ್ಯಕ್ಷರಾಗಿ ಭಾರತಿ ಮದಭಾವಿ, ವಿನೂತಾ ಕಾಮೋಜಿ,ಖಜಾಂಚಿಯಾಗಿ ಶಕುಂತಲಾ ಅಂಗಡಿ, ಸಹಖಜಾಂಚಿಯಾಗಿ ಗಿರಿಜಾ ಹಿರೇಮಠ, ಕಾರ್ಯದರ್ಶಿಗಳಾಗಿ ಶಿವಲೀಲಾ ಪಾಟೀಲ, ಸುನಂಧಾ ಕಾನನ್ನವರ, ಸಹಕಾರ್ಯದರ್ಶಿಗಳಾಗಿ ಗಂಗಾಭೀಕಾ ದಯನ್ನವರ, ರಾಜೇಶ್ವರಿ ದಾನೂರ ಹಾಗೂ ಕಾರ್ಯಕಾರಿ ಸಮಿತಿ ಮತ್ತು ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ.