RNI NO. KARKAN/2006/27779|Saturday, October 19, 2024
You are here: Home » breaking news » ರಾಯಬಾಗ: ಕುರಿ ಮೇಯಿಸಿದ ಹ್ಯಾಟ್ರಿಕ್ ಶಾಸಕ ದುರ್ಯೋಧನ ಐಹೋಳೆ

ರಾಯಬಾಗ: ಕುರಿ ಮೇಯಿಸಿದ ಹ್ಯಾಟ್ರಿಕ್ ಶಾಸಕ ದುರ್ಯೋಧನ ಐಹೋಳೆ 

ಕುರಿ ಮೇಯಿಸಿದ ಹ್ಯಾಟ್ರಿಕ್ ಶಾಸಕ ದುರ್ಯೋಧನ ಐಹೋಳೆ

ರಾಯಬಾಗ ಜೂ 23 : ಬೆಳಗಾವಿ ಜಿಲ್ಲೆಯ ರಾಯಬಾಗ ಮತಕ್ಷೇತ್ರದ ಹ್ಯಾಟ್ರಿಕ್ ಶಾಸಕ ದುರ್ಯೋಧನ ಐಹೋಳೆ ಹೆಗಲ ಮೇಲೆ ಕಂಬಳಿ ಹಾಕಿಕೊಂಡು ಕೈಯಲ್ಲಿ ಕೋಲು ಹೀಡಿದುಕೊಂಡು ಕುರಿ ಮೇಯಿಸಿದ ಪ್ರಸಂಗ ಜರುಗಿದೆ . ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಹೊರವಲಯದ ಮಡ್ಡಿಗಾಡಿನ ಪ್ರದೇಶದಲ್ಲಿ ಐಹೋಳೆ ಅವರು ಕುರಿ ಮೇಯಿಸಿದ್ಧಾರೆ
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸಿರುವ ಸಂತ ಬಾಳು ಅಜ್ಜಾನ ಕುರಿಗಳು ರಾಯಬಾಗಕ್ಕೆ ಆಗಮಿಸಿವೆ. ಈ ಕುರಿಗಳನ್ನು ಮೇಯಿಸಿದರೆ ರಾಜಕೀಯದಲ್ಲಿ ಒಳ್ಳೆಯದಾಗುತ್ತದೆ ಎಂಬ ಪ್ರತೀತಿಯಿದೆ. ಅದಕ್ಕಾಗಿ ರಾಜ್ಯಕ್ಕೆ ಆಗಮಿಸುವ ಕುರಿಗಳನ್ನು ಈ ಭಾಗದಲ್ಲಿನ ಜನಪ್ರತಿನಿಧಿಗಳು ಮೇಯಿಸುವುದು ವಾಡಿಕೆಯಾಗಿದೆ.
ಈ ಹಿನ್ನೆಲೆ ಶಾಸಕ ದುರ್ಯೋದನ ಐಹೊಳೆ ಅವರು ಕುರಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಕುರಿ ಮೇಯಿಸಿದರು. 

Related posts: