ಘಟಪ್ರಭಾ:ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಚಾಲನೆ
ಧುಪದಾಳ ಗ್ರಾ.ಪಂ ವ್ಯಾಪ್ತಿಯ ಬಸವನಗರದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಚಾಲನೆ ನೀಡಿದರು.
ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಚಾಲನೆ
ಘಟಪ್ರಭಾ ಜೂ 27 : ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನಗರದಲ್ಲಿ ಅಲ್ಪಸಂಖ್ಯಾತ ಇಲಾಖೆಯಿಂದ ಮಂಜೂರಾದ 5 ಲಕ್ಷ ರೂ.ಗಳ ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ, ಮುಖಂಡರಾದ ಡಿ.ಎಂ.ದಳವಾಯಿ, ಜಿ.ಪಂ ಸದಸ್ಯೆ ಮೀನಾಕ್ಷಿ ಜೋಡಟ್ಟಿ, ಮಹೇಶ ಪಾಟೀಲ, ಅನ್ನಪ್ಪಾ ಹುಣಗುಂದ, ಸದಸ್ಯರಾದ ಶೇಖರ ರಜಪೂತ, ಪ್ರಕಾಶ ಡಾಂಗೆ, ಕಲ್ಲಪ್ಪಾ ಸನದಿ, ನಾಗರಾಜ ನಾಯಿಕ, ಬಾಹುಬಲಿ ಕಡಹಟ್ಟಿ, ಹಸೀನಾ ಜತ್ತಿ, ಸಾವಿತ್ರಿ ಕುಂದರಗಿ, ಮಲ್ಲು ಕೋಳಿ ಸೇರಿದಂತೆ ಎಲ್ಲ ಗ್ರಾ.ಪಂ ಸದಸ್ಯರು ಹಿರಿಯರು ಇದ್ದರು.