ಬೆಳಗಾವಿ:ಅನಂತ್ ಕುಮಾರ್ ಸಚಿವ ಹೆಗಡೆ ವಿರುದ್ಧ ಹರಿಹಾಯ್ದ ಸಚಿವ ರಮೇಶ್ ಜಾರಕಿಹೊಳಿ
ಅನಂತ್ ಕುಮಾರ್ ಸಚಿವ ಹೆಗಡೆ ವಿರುದ್ಧ ಹರಿಹಾಯ್ದ ಸಚಿವ ರಮೇಶ್ ಜಾರಕಿಹೊಳಿ
ಬೆಳಗಾವಿ ಜು 15 : ಕಾಂಗ್ರೆಸ್ ಪುಕ್ಕಲು ಪಕ್ಷ, ಬಿಜೆಪಿ ಹುಲಿ ಇದ್ದಹಾಗೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗೆಡೆ ವಿರುದ್ಧ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹರಿಹಾಯ್ದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗಡೆ ಹೊಲಸು ಮನುಷ್ಯ, ಅವನ ಬಗ್ಗೆ ಮಾತನಾಡುವುದು ಹೇಸಿಗೆ ವಿಷಯ, ಬಿಜೆಪಿ ರಾಷ್ಟ್ರೀಯ ಪಕ್ಷ, ಅದರ ಬಗ್ಗೆ ಅಭಿಮಾನ ಇದೆ. ಆದರೆ, ಆ ವ್ಯಕ್ತಿ ಬಗ್ಗೆ ಮಾತನಾಡಲು ಹೇಸಿಗೆ ಬರುತ್ತದೆ ಎಂದು ತಿರುಗೇಟು ನೀಡಿದ್ದಾರೆ