ಗೋಕಾಕ:ಇಂದಿನ ಯುವಶಕ್ತಿಯೇ ನವಭಾರತ ನಿರ್ಮಾಣ ಶಕ್ತಿಯಾಗಿದೆ : ಎಮ್.ಎಲ್.ಡಬ್ಬನವರ
ಇಂದಿನ ಯುವಶಕ್ತಿಯೇ ನವಭಾರತ ನಿರ್ಮಾಣ ಶಕ್ತಿಯಾಗಿದೆ : ಎಮ್.ಎಲ್.ಡಬ್ಬನವರ
ಗೋಕಾಕ ಜು 19 : ಇಂದಿನ ಯುವಶಕ್ತಿಯೇ ನವಭಾರತ ನಿರ್ಮಾಣ ಶಕ್ತಿಯಾಗಿದೆ ಎಂದು ಇಲ್ಲಿಯ ಸರ್ಕಾರಿ ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ಎಮ್.ಎಲ್.ಡಬ್ಬನವರ ಹೇಳಿದರು.
ಗುರುವಾರದಂದು ಇಲ್ಲಿಯ ಸ್ವಾಮಿ ವಿವೇಕಾನಂದ ಐಟಿಐ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಬಿಳ್ಕೋಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಓದು-ಬರಹ ಒಂದೇ ಶಿಕ್ಷಣವಲ್ಲ, ವಿದ್ಯೆಯೊಂದಿಗೆ ಬುದ್ದಿವಂತರಾಗಿ, ಐಟಿಐ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗದ ಅವಕಾಶಗಳೊಂದಿಗೆ ಹೆಚ್ಚಿನ ವ್ಯಾಸಂಗ ಮಾಡುವ ಅವಕಾಶಗಳಿವೆ. ಶಿಕ್ಷಕರ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಸಂಸ್ಕಾರವಂತರಾಗಿ ಉದ್ಯೋಗವನ್ನು ಗೌರವಿಸಿ ತಮ್ಮ ವೃತ್ತಿ ಜೀವನವನ್ನು ಸುಂದರಗೊಳಿಸಿಕೊಳ್ಳಿರೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಸ್.ಡಿ.ಕುಲಕರ್ಣಿ ವಹಿಸಿದ್ದರು. ವೇದಿಕೆ ಮೇಲೆ ಸಂಸ್ಥೆಯ ಕಾರ್ಯದರ್ಶಿ ಆರ್.ಎಲ್.ಕೊರಾಡಿ, ಪ್ರಾಚಾರ್ಯ ಎಸ್.ಎಸ್.ಕುಲಕರ್ಣಿ ಇದ್ದರು. ಎಸ್.ಎಮ್.ಪಾತ್ರೋಟ ಸ್ವಾಗತಿಸಿ, ವಂದಿಸಿದರು.