RNI NO. KARKAN/2006/27779|Friday, October 18, 2024
You are here: Home » breaking news » ಘಟಪ್ರಭಾ:ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮ

ಘಟಪ್ರಭಾ:ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮ 

ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮ

ಘಟಪ್ರಭಾ ಅ 10 : ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಶ್ರೀ ಶಿವಶರಣ ಹರಳಯ್ಯನವರ ಮಠದಲ್ಲಿ ಶ್ರಾವಣ ಮಾಸದ ನಿಮಿತ್ಯ ಶ್ರೀ ಸಿದ್ಧಾರೂಢರ ಜೀವನ ಚರಿತ್ರೆಯ ಪ್ರವಚನ ಕಾರ್ಯಕ್ರಮವು ದಿ.12ರಿಂದ ಸಪ್ಟಂಬರ್ 9ರವರೆಗೆ ಪ್ರತಿದಿನ ಸಾಯಂಕಾಲ 7 ಗಂಟೆಗೆ ಶ್ರೀಮಠದಲ್ಲಿ ಜರುಗಲಿದೆ.
ಪ್ರವಚನ ಕಾರ್ಯಕ್ರಮದ ಉದ್ಘಾಟನೆಯನ್ನು ಶನಿವಾರದಂದು ಮಠದಲ್ಲಿ ಸಂಜೆ 7 ಗಂಟೆಗೆ ಜರುಗಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಿವಶರಣ ಹರಳಯ್ಯ ಸಮಾಜ ಅಧ್ಯಕ್ಷ ಜಿ.ಎನ್.ಸಾಂಗಲಿ ವಹಿಸುವರು. ಪ್ರವಚನಕಾರ ರಾಯಪ್ಪ ಮಾಡಲಗಿ ಪ್ರವಚನ ನಡೆಸಿಕೊಡುವವರು. ಅತಿಥಿಗಳಾಗಿ ಲಕ್ಷ್ಮಣ ಕಮತಾನಟ್ಟಿ ಸಂತರು ಆಗಮಿಸುವರು. ಸರ್ವ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶ್ರೀ ಶಿವಶರಣ ಹರಳಯ್ಯ ಸಮಾಜದ ಕಾರ್ಯದರ್ಶಿ ವಿಠ್ಠಲ ಕರೋಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: