RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಗೋಸಬಾಳ ಗ್ರಾಮದಲ್ಲಿ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ

ಗೋಕಾಕ:ಗೋಸಬಾಳ ಗ್ರಾಮದಲ್ಲಿ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ 

ಗೋಸಬಾಳ ಗ್ರಾಮದಲ್ಲಿ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ

ಬೆಟಗೇರಿ ಅ 29 : ಸಮೀಪದ ಗೋಸಬಾಳ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮ, ಶ್ರೀಗಳಿಗೆ ಪಾದಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸತ್ಕಾರ ಸಮಾರಂಭ ಸ್ಥಳೀಯ ಭಕ್ತರು, ಗಣ್ಯರಿಂದ ಇದೇ ಗುರುವಾರ ಆ.30 ರಿಂದ ಸೋಮವಾರ ಸೆ.3 ರ ತನಕ ಐದು ದಿನಗಳ ಕಾಲ ಜರುಗಲಿದೆ.
ಆ.30 ರಂದು ಬೆಳಗ್ಗೆ 8 ಗಂಟೆಗೆ ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ, ಲಖನಾಯ್ಕನಕೊಪ್ಪ ಪೂರ್ಣಾನಂದ ಮಠದ ಕೃಷ್ಣಾನಂದ ಮಹಾಸ್ವಾಮಿಜಿ ಅವರ ಸಾನಿಧ್ಯದಲ್ಲಿ ಓಂಕಾರ ಸಪ್ತಾಹ ಸಕಲ ಪೂಜೆ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗುವದು. ಸಂಜೆ 7.ಗಂಟೆಗೆ ಭಾಗೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಅವರ ಪಾದಪೂಜೆ, ಸತ್ಕಾರ ಸಮಾರಂಭ ಹಾಗೂ ಶ್ರೀ ಗುರು ವಚನೋಪದೇಶವನಾಲಿಸಿದಾಗಳಹುದುನರರಿಗೆ ಮುಕುತಿ ವಿಷಯದ ಕುರಿತು ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಆ.31 ರಂದು ಸಂಜೆ 7 ಗಂಟೆಗೆ ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ಅವರ ಪಾದಪೂಜೆ, ಸತ್ಕಾರ ಸಮಾರಂಭ ಹಾಗೂ ಭಕ್ತಿಯೆಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜವಂಕುರಿಸಿ.. ವಿಷಯದ ಕುರಿತು ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಸೆ.1ರಂದು ಸಂಜೆ 7 ಗಂಟೆಗೆ ಗೋಕಾಕದ ಜ್ಞಾನ ಮಂದಿರದ ಸುವರ್ಣಾತಾಯಿ ಹೊಸಮಠ ಅವರ ಪಾದಪೂಜೆ, ಸತ್ಕಾರ ಸಮಾರಂಭ ಹಾಗೂ ಎಲ್ಲ ಎಲ್ಲವನರಿದು ಫಲವೇನಯ್ಯಾ… ವಿಷಯದ ಕುರಿತು ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಸೆ.2ರಂದು ಸಂಜೆ 7 ಗಂಟೆಗೆ ಚಿಪ್ಪಲಕಟ್ಟಿ-ಸಾಲಹಳ್ಳಿ ಬ್ರಹನ್ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಜಿ ಅವರ ಪಾದಪೂಜೆ, ಸತ್ಕಾರ ಸಮಾರಂಭ ಹಾಗೂ ಭೂಮಿ ನಿನ್ನದಲ್ಲ ಹೇಮ ನಿನ್ನದಲ್ಲ ಕಾಮಿನಿ ನಿನ್ನವಳಲ್ಲ… ವಿಷಯದ ಕುರಿತು ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಸೆ.3ರಂದು ಸಂಜೆ 7 ಗಂಟೆಗೆ ಗುಬ್ಬಲಗುಡ್ಡ ಕೆಂಪಯ್ಯ ಅಜ್ಜನವರ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಅವರ ಪಾದಪೂಜೆ, ಸತ್ಕಾರ ಸಮಾರಂಭ ಹಾಗೂ ಆರುನಾನೆಂದು ವಿಚಾರಿಸು ವಿಷಮ ಸಂಸಾರವಿದು ಕನಸೆಂದರಿ… ವಿಷಯದ ಕುರಿತು ಪ್ರವಚನ ಕಾರ್ಯಕ್ರಮ ನಡೆಯಲಿದೆ.
ರಾಯಬಾಗ ತಾಲೂಕಿನ ನಂದಿಕುರಳಿಯ ಮಹಾದೇವಪ್ಪ ಪೂಜೇರಿ ಅವರಿಂದ ಆ.30ರಿಂದ ಸೆ.3ರ ತನಕ ಪ್ರತಿದಿನ ಸಾಯಂಕಾಲ 6 ಗಂಟೆಗೆ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಥಳೀಯ ಬಲಭೀಮ ದೇವಸ್ಥಾನದಲ್ಲಿ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ರಾಜಕೀಯ ಮುಖಂಡರು, ಭಕ್ತರು, ಈ ಸಪ್ತಾಹ ಹಾಗೂ ಪ್ರವಚನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಲಲಿದ್ದಾರೆಂದು ಇಲ್ಲಿಯ 19 ನೇ ವರ್ಷದ ಓಂಕಾರ ಸಪ್ತಾಹ ಹಾಗೂ ದ್ವಿತೀಯ ವರ್ಷದ ಪ್ರವಚನ ಕಾರ್ಯಕ್ರಮದ ಆಯೋಜಕ ಸಮಿತಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

Related posts: