ಖಾನಾಪುರ:ಓಂಕಾರ ತಿರವೀರ ಅಥ್ಲೆಟಿಕನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಓಂಕಾರ ತಿರವೀರ ಅಥ್ಲೆಟಿಕನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಖಾನಾಪುರ ಸೆ 11 : ಪಟ್ಟಣದಲ್ಲಿರುವ ಶಾಂತಿನಿಕೇತನ ಸಿ.ಬಿ.ಎಸ್.ಸಿ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ *ಓಂಕಾರ ತಿರವೀರ* ಮತ್ತು ೮ನೇ ತರಗತಿ ವಿದ್ಯಾರ್ಥಿ ಸಚಿನ ಜಕಮೊಜಿ ಇತ್ತಿಚೆಗೆ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಜಯಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಓಂಕಾರ ಶಾಟಪುಟನಲ್ಲಿ ಮತ್ತು ಸಚಿನ್ ೨೦೦ ಓಟದಲ್ಲಿ ಜಯಗಳಿಸಿದ್ದಾರೆ. ಇದೇ ತಿಂಗಳು ಕೊನೆಯ ವಾರದ ೧೪ನೇ ಸಪ್ಟೆಂಬರ್ ರಂದು ತೆಲಂಗಾಣ ರಾಜ್ಯದ ಹೈದ್ರಾಬಾದ್ ನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಇಬ್ಬರೂ ವಿದ್ಯಾರ್ಥಿಗಳು ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.