ಬೆಳಗಾವಿ:ಟ್ರಾಫಿಕ್ ಸಮಸ್ಯೆ ಪರಿಹರಿಸಿ : ಐಜಿಪಿ ಮತ್ತು ಎಸ್ ಪಿ ಅವರಿಗೆ ಕರವೇ ಅಧ್ಯಕ್ಷ ಬಸವರಾಜ ಮನವಿ
ಟ್ರಾಫಿಕ್ ಸಮಸ್ಯೆ ಪರಿಹರಿಸಿ : ಐಜಿಪಿ ಮತ್ತು ಎಸ್ ಪಿ ಅವರಿಗೆ ಕರವೇ ಅಧ್ಯಕ್ಷ ಬಸವರಾಜ ಮನವಿ
ಬೆಳಗಾವಿ ಸೆ 15 : ಗೋಕಾಕದಲ್ಲಿ ತಲೆದೋರಿರುವ ಟ್ರಾಫಿಕ್ ನಿಯಂತ್ರಣಕ್ಕೆ ಸೂಕ್ತ ಕ್ರಮ ಜರುಗಿಸುವಂತೆ ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಬೆಳಗಾವಿ ಉತ್ತರ ವಲಯದ ಐಜಿಪಿ ಅಲೋಕ್ ಕುಮಾರ ಮತ್ತು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸುಧೀರಕುಮಾರ್ ರೆಡ್ಡಿ ಅವರಿಗೆ ಮನವಿ ಮಾಡಿಕೊಂಡರು
ಶನಿವಾರದಂದು ನೂತನ ಗೋಕಾಕ ಜಿಲ್ಲೆ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಅವರಿಗೆ ಮನವಿ ನೀಡಲು ಹೋದ ಸಂದರ್ಭದಲ್ಲಿ ಐಜಿಪಿ ಅಲೋಕ್ ಕುಮಾರ ಮತ್ತು ಎಸ್.ಪಿ ಸುಧೀರ ಕುಮಾರ್ ರೆಡ್ಡಿ ಅವರನ್ನು ಭೇಟಿಯಾದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಅವರು ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಗೋಕಾಕ ನಗರದಲ್ಲಿ ದಿನ ನಿತ್ಯ ಸಾವಿರಾರು ಜನರು ವ್ಯಾಪಾರ ವಹಿವಾಟು , ವಿದ್ಯಾಭ್ಯಾಸ ಸೇರಿದಂತೆ ಇನ್ನೀತರ ಕೆಲಸಗಳಿಗಾಗಿ ಗೋಕಾಕ ನಗರವನ್ನೇ ಅವಲಂಬಿಸಿದ್ದಾರೆ ಇದರಿಂದ ಪ್ರತಿನಿತ್ಯ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು , ಸಾರ್ವಜನಿಕರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ . ಆದಷ್ಟು ಬೇಗ ಸಂಚಾರ ದಟ್ಟಣೆ ನಿಯಂತ್ರಿಸಲು ಸೂಕ್ತ ಕ್ರಮ ಕೈಗೋಳ್ಳುವಂತೆ ಖಾನಪ್ಪನವರ ಮೌಖಿಕವಾಗಿ ಮನವಿ ಮಾಡಿಕೊಂಡರು
ಖಾನಪ್ಪನವರ ಅವರ ಮಾತುಗಳನ್ನು ತದೇಕ ಚಿತ್ತದಿಂದ ಆಲಿಸಿದ ಪೊಲೀಸ ವರಿಷ್ಠಾಧಿಕಾರಿ ಸುಧೀರ ಕುಮಾರ್ ರೆಡ್ಡಿ ಅವರು ಕಛೇರಿಗೆ ಬಂದು ಮನವಿ ಸಲ್ಲಿಸುವಂತೆ ಸೂಚಿಸಿ , ಸಮಸ್ಯೆ ಬಗೆಹರಿಸುವಂತೆ ಭರವಸೆ ನೀಡಿದರು