ಅಥಣಿ:ಅಥಣಿಯ ಖವಟಿಕೋಪ್ಪ ಗ್ರಾಮಕ್ಕೆ ಆವರಿಸಿದ ಮಹಾಮಾರಿ ಡೆಂಗ್ಯೂ : ಆತಂಕದಲ್ಲಿ ಗ್ರಾಮಸ್ಥರು
ಅಥಣಿಯ ಖವಟಿಕೋಪ್ಪ ಗ್ರಾಮಕ್ಕೆ ಆವರಿಸಿದ ಮಹಾಮಾರಿ ಡೆಂಗ್ಯೂ : ಆತಂಕದಲ್ಲಿ ಗ್ರಾಮಸ್ಥರು
ಅಥಣಿ ಜೂ 20: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖವಟಿಕೋಪ್ಪ ಗ್ರಾಮದಲ್ಲಿ ಸೂಮಾರು30 ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ಆವರಿಸಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.
ಖವಟಕೊಪ್ಪದಲ್ಲಿನ ಸೊಳ್ಳೆಗಳ ಕಾಟದಿಂದ ಇಡೀ ಗ್ರಾಮವೇ ಡೆಂಗ್ಯೂ ಜ್ವರದಿಂದ ಬಳಲುತ್ತಿದೆ. ಸುಮಾರು 30 ಕ್ಕೂ ಹೆಚ್ಚು ಜನರು ಡೆಂಗ್ಯೂದಿಂದ ಬಳಲುತ್ತಿದ್ದಾರೆ. ಇವರು ಅಥಣಿಯ ಶಿವಗಂಗಾ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವೈದ್ಯ ಡಾ. ತೇರದಾಳ ಚಿಕಿತ್ಸೆ ನೀಡುತ್ತಿದ್ದಾರೆ
ಕಳೆದ ಒಂದು ವಾರದಿಂದ ಬೀಳುತ್ತಿರುವ ತುಂತುರು ಮಳೆಯಿಂದಾಗಿ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೆ ಜ್ವರ ಹರಡಿದೆ ಎಂದು ವೈದ್ಯರು ತಿಳಿಸಿದ್ದಾರೆ