RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಕನ್ನಡ ಸೇನೆ ಕಛೇರಿಗೆ ಮಾಜಿ ಸಂಸದ ಅಮರಸಿಂಗ ಪಾಟೀಲ ಬೇಟಿ

ಘಟಪ್ರಭಾ:ಕನ್ನಡ ಸೇನೆ ಕಛೇರಿಗೆ ಮಾಜಿ ಸಂಸದ ಅಮರಸಿಂಗ ಪಾಟೀಲ ಬೇಟಿ 

ಕನ್ನಡ ಸೇನೆ ಕಛೇರಿಗೆ ಮಾಜಿ ಸಂಸದ ಅಮರಸಿಂಗ ಪಾಟೀಲ ಬೇಟಿ

ಘಟಪ್ರಭಾ ನ 8 : ಸ್ಥಳೀಯ ಕನ್ನಡ ಸೇನೆ ಸಂಘಟನೆಯ ಕಛೇರಿಗೆ ಮಾಜಿ ಸಂಸದ ಅಮರಸಿಂಗ ಪಾಟೀಲ ಬುಧವಾರ ಭೆಟ್ಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡಪರ ಸಂಘಟನೆಗಳು ನಾಡು. ನುಡಿಗಾಗಿ ಹೋರಾಟ ಮಾಡುತ್ತಾ ಬಂದಿವೆ. ಪ್ರತಿಭಟನೆ ಮತ್ತು ಹೋರಾಟಗಳು ಶಾಂತಿಯತವಾಗಿ ಮತ್ತು ಕಾನೂನು ಚೌಕಟ್ಟಿನಲ್ಲಿರಬೇಕು. ಸಾರ್ವಜನಿಕ ಆಸ್ತಿ ಪಾಸ್ತಿ ಹಾಗೂ ಜನಸಾಮಾನ್ಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಅಮರಸಿಂಗ ಪಾಟೀಲ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ಹಾಗೂ ನಿವೃತ್ತ ಚಿತ್ರಕಲಾ ಶಿಕ್ಷಕ ಜಿ.ಎ.ಪತ್ತಾರ ಇವರನ್ನು ಸಂಘಟನೆ ಪರವಾಗಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾಧ್ಯಕ್ಷ ಅಪ್ಪಾಸಾಬ ಮುಲ್ಲಾ, ತಾಲೂಕಾ ಉಪಾಧ್ಯಕ್ಷ ರಾಘವೇಂದ್ರ ಪತ್ತಾರ, ಬಾಬುರಾವ ಪತ್ತಾರ, ಅನೀಲ ಸಾವಂತ, ಮಹೇಶ ಪತ್ತಾರ, ಡಾ. ವಿಜಯಕುಮಾರ ಬಡಕುಂದ್ರಿ, ಸಚೀನ ಪತ್ತಾರ, ಸಂತೋಷ ಸೊಂಟನವರ, ಸಿದ್ದಪ್ಪಾ ಕೆಂಚನ್ನವರ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

Related posts: