ಯಮಕನಮರಡಿ:ಪ್ರತಿಭಾ ಪುರಸ್ಕಾರ ಗ್ರಾಮೀಣ ಪ್ರತಿಭೆಗಳಿಗೆ ಸ್ವೂರ್ತಿ : ಪ್ರೀಯಾಂಕಾ ಜಾರಕಿಹೊಳಿ
ಪ್ರತಿಭಾ ಪುರಸ್ಕಾರ ಗ್ರಾಮೀಣ ಪ್ರತಿಭೆಗಳಿಗೆ ಸ್ವೂರ್ತಿ : ಪ್ರೀಯಾಂಕಾ ಜಾರಕಿಹೊಳಿ
ಯಮಕನಮರಡಿ ನ 11 : ಸತೀಶ ಪ್ರತಿಭಾ ಪುರಸ್ಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ವೂರ್ತಿಯಾಗಿದೆ ಎಂದು ಪ್ರೀಯಾಂಕಾ ಜಾರಕಿಹೊಳಿ ಹೇಳಿದರು
ರವಿವಾರದಂದು ಯಮಕನಮರಡಿಯಲ್ಲಿ ಜರುಗಿದ 8 ನೇ ಸತೀಶ ಪ್ರತಿಭಾ ಪುರಸ್ಕಾರ ಅಂತಿಮ ಹಂತದ ಸ್ವರ್ಧಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು
ಕಳೆದ 8 ವರ್ಷಗಳಿಂದ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಾಡಿಗೆ ಪರಿಚಯಿಸುವ ನಿಟ್ಟನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಈ ಭಾಗದ ವಿದ್ಯಾರ್ಥಿಗಳಿಗೆ ಸ್ವೂರ್ತಿದಾಯಕವಾಗಿದ್ದು , ಹಲವಾರು ವಿದ್ಯಾರ್ಥಿಗಳು ರಾಜ್ಯದಲ್ಲಿ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಲು ಅನುಕೂಲವಾಗಿರುವದು ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರಲ್ಲದೆ ಸ್ವರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಿದ ಎಲ್ಲ ವಿದ್ಯಾರ್ಥಿ , ವಿದ್ಯಾರ್ಥಿನೀಯರಿಗೆ ಶುಭ ಕೋರಿದರು.
ವೇದಿಕೆಯಲ್ಲಿ ರಾಹುಲ್ ಜಾರಕಿಹೋಳಿ , ಎನ್ಎಸ್ಎಪ್ ಕಾರ್ಯದರ್ಶಿ ಎಸ್.ಎ. ರಾಮಗಾನಟ್ಟಿ , ಅಬಕಾರಿ ಜಂಟಿ ಆಯುಕ್ತ ಮಂಜುನಾಥ್ ಸೇರಿದಂತೆ ಅನೇಕರು ಇದ್ದರು
ಕಾರ್ಯಕ್ರಮವನ್ನು ಎ.ಜಿ.ಕೋಳಿ ,ರಾಮಪ್ಪ ಮೀರ್ಜಿ ನಿರೂಪಿಸಿ ವಂದಿಸಿದರು.