RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಎಂಇಎಸ್ ಮಹಾಮೇಳಾವದಲ್ಲಿ ಮಧುಶ್ರೀ ಭಾಗಿ : ಖಾನಪ್ಪನವರ ಆಕ್ರೋಶ

ಗೋಕಾಕ:ಎಂಇಎಸ್ ಮಹಾಮೇಳಾವದಲ್ಲಿ ಮಧುಶ್ರೀ ಭಾಗಿ : ಖಾನಪ್ಪನವರ ಆಕ್ರೋಶ 

ಎಂಇಎಸ್  ಮಹಾಮೇಳಾವದಲ್ಲಿ ಮಧುಶ್ರೀ ಭಾಗಿ  : ಖಾನಪ್ಪನವರ ಆಕ್ರೋಶ

ಗೋಕಾಕ ಡಿ 10 : ಬೆಳಗಾವಿಯಲ್ಲಿ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರ ನಡೆಸುತ್ತಿರುವ ಚಳಿಗಾಲ ಅಧಿವೇಶನ ವಿರೋಧಿಸಿ ಎಂಇಎಸ್ ವತಿಯಿಂದ ಆಯೋಜಿಸಿದ್ದ ಮಹಾಮೇಳದಲ್ಲಿ ಉಪ ಮೇಯರ್ ಮಧುಶ್ರೀ ಪೂಜಾರಿ ಪಾಲ್ಗೊಂಡಿರುವದು ತರವಲ್ಲ ಎಂದು ಗೋಕಾಕ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರತಿ ವರ್ಷ ರಾಜ್ಯ ಸರಕಾರ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸುವ ಸಂದರ್ಭದಲ್ಲಿ ನಾಡ ವಿರೋಧಿ ಎಂಇಎಸ್ ಸಂಘಟನೆ ಮಹಾ ಮೇಳಾವ ನಡೆಸಿ ಕನ್ನಡವನ್ನು ಮತ್ತು ಕರ್ನಾಟಕವನ್ನು ಅವಮಾನಿಸುತ್ತಿರುವದನ್ನು ಸರಕಾರ ಮತ್ತು ಜಿಲ್ಲಾ ಪೊಲೀಸ ಇಲಾಖೆ ಸುಮ್ಮನೆ ನೋಡುತ್ತಿರುವ ಕ್ರಮ ಖಂಡನೀಯ ಈ ಭಾರಿ ಪೊಲೀಸ ಇಲಾಖೆಯ ಪರವಾಣಿಗೆ ಇಲ್ಲದೆ ಮಹಾ ಮೇಳಾವ ಸಂಘಟಸಿರುವ ಎಂಇಎಸ್ ನಾಯಕರನ್ನು ಯಾವುದೆ ಮುಲ್ಲಾಜಿಲ್ಲದೆ ಪೊಲೀಸರು ಬಂಧಿಸಿ ಶಿಕ್ಷಿಸುವ ಕ್ರಮ ಜರುಗಿಸಬೇಕು ಮತ್ತು ಮೇಳಾವದಲ್ಲಿ ಭಾಗ ಹಿಸಿದ ಉಪಮೇಯರ್ ಮಧುಶ್ರೀ ಪೂಜಾರಿ ಸದಸ್ಯತ್ವವನ್ನು ಸರಕಾರ ರದ್ದು ಗೋಳಿಸಬೇಕೆಂದು ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹಿಸಿದ್ದಾರೆ

Related posts: