ಮೂಡಲಗಿ:ಹಕ್ಕುಚ್ಯುತಿ ಶಿಕ್ಷೆ ಹಿಂಪಡಿಯಲು ಆಗ್ರಹ : ಮೂಡಲಗಿಯ ಪತ್ರಕರ್ತರಿಂದ ರಾಜಪಾಲರಿಗೆ ಮನವಿ
ಹಕ್ಕುಚ್ಯುತಿ ಶಿಕ್ಷೆ ಹಿಂಪಡಿಯಲು ಆಗ್ರಹ : ಮೂಡಲಗಿಯ ಪತ್ರಕರ್ತರಿಂದ ರಾಜಪಾಲರಿಗೆ ಮನವಿ
ಮೂಡಲಗಿ ಜೂನ.29 . ಹಾಯ್ ಬೆಂಗಳೂರ ವಾರ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಮತ್ತು ಯಲಹಂಕಾ ವಾಯ್ಸ ಸಂಪಾದಕ ಅನಿಲರಾಜ ಅವರುಗಳ ಪ್ರಕರಣದಲ್ಲಿ ಸರಕಾರ ತಪ್ಪು ನಿದಾ೯ರ ತೆಗೆದುಕೊಂಡಿದ್ದು ತಪ್ಪು ತೀಪ್ಪು೯ನ್ನು ನೀಡಿದನ್ನು ಖಂಡಿಸಿ ಮೂಡಲಗಿ ತಾಲೂಕಾ ಪತ್ರಕತ೯ರ ಬಳಗ ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಅಪಿ೯ಸಿದರು
ಸ್ಥಳಿಯ ಕಲ್ಮೇಶ್ವರ ವೃತ್ತದಲ್ಲಿ ಸೇರಿದ ಪತ್ರಕರ್ತರು ಸರಕಾರದ ಆದೇಶದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು
ಹಿರಿಯ ಪತ್ರಕರ್ತ ಹಾಗೂ ಸಂಪಾದಕ ರವಿ ಬೆಳಗೆರೆ ಮತ್ತು ನಾಗರಾಜ್ ಅವರಿಗೆ ವಿಧಿಸಿದ ಹಕ್ಕುಚ್ಯುತಿ ಶಿಕ್ಷೆ ಕಾನೂನು ಬಾಹಿರವಾಗಿದೆ, ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕ್ರಮವಾಗಿದೆ. ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು
ಒಂದು ವಷ೯ ಶಿಕ್ಷೆ ಹಾಗೂ ದಂಡವನ್ನು ತುಂಬಬೇಕೆಂದು ಹೊರಡಿಸಿದ ಆದೇಶವನ್ನು ಕೂಡಲೇ ಹಿಂಪಡೆದು ಪ್ರಕರಣದ ಪುನ: ಪರಿಶೀಲನೆ ಆಗಬೇಕೆಂದು ಪತ್ರಕತ೯ರ ಬಳಗ ಒತ್ತಾಯಿಸಿದರು