ಗೋಕಾಕ:ಮುಖ್ಯಮಂತ್ರಿಗಳ ಪರಿಹಾರ ನಿಧಿ ಚೆಕ್ ವಿತರಣೆ
ಮುಖ್ಯಮಂತ್ರಿಗಳ ಪರಿಹಾರ ನಿಧಿ ಚೆಕ್ ವಿತರಣೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 7 :
ಶಾಸಕ ರಮೇಶ ಜಾರಕಿಹೊಳಿ ಅವರ ಶಿಪಾರಸ್ಸಿನ ಮೇರೆಗೆ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಾಲೂಕಿನ ಮುಸಲ್ಮಾರಿ ಗ್ರಾಮದ ಗೌರವ್ವ ಸನದಿ ಅವರಿಗೆ ಮಂಜೂರಾದ 1.62 ಲಕ್ಷ ರೂಗಳ ಸಹಾಯಧನ ಚೆಕ್ನ್ನು ಜಿ.ಪಂ.ಸದಸ್ಯ ಟಿ.ಆರ್.ಕಾಗಲ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಗುಜನಾಳ ಗ್ರಾ.ಪಂ ಅಧ್ಯಕ್ಷ ಭೀಮಗೌಡ ಪೋಲಿಸಗೌಡರ, ತಹಶೀಲದಾರ ಪ್ರಕಾಶ ಹೊಳೆಪ್ಪಗೊಳ, ಕಂದಾಯ ಅಧಿಕಾರಿ ಆರ್.ಎನ್.ನಕಾತಿ ಸೇರಿದಂತೆ ಅನೇಕರು ಇದ್ದರು.