ಖಾನಾಪುರ:ನಿಯಮಿತ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರಿಂದ ಹೆಸ್ಕಾಂಗೆ ಮನವಿ
ನಿಯಮಿತ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರಿಂದ ಹೆಸ್ಕಾಂಗೆ ಮನವಿ
ನಮ್ಮ ಬೆಳಗಾವಿ ಸುದ್ದಿ , ಖಾನಾಪುರ ಮಾ 15 :
ರೈತರ ಪಂಪಸೆಟ್ಗಳಿಗೆ ನಿಯಮಿತವಾಗಿ ವಿದ್ಯುತ್ ಸರಬರಾಜು ಮಾಡಲು ಆಗ್ರಹಿಸಿದ ತಾಲೂಕಿನ ಲಿಂಗನಮಠ ಮತ್ತು ಸುತ್ತಲಿನ ಭಾಗದ ರೈತರು ದಿನಕ್ಕೆ ಕನಿಷ್ಠ 7 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸರ್ಕಾರದ ಆದೇಶದ ಪ್ರಕಾರ ದಿನಕ್ಕೆ 7 ಗಂಟೆ ತ್ರೀ ಫೇಸ್ ವಿದ್ಯುತ್ ನೀಡಬೇಕೆನ್ನುವ ಆದೇಶವಿದ್ದರೂ 4 ಗಂಟೆ ಮಾತ್ರ ನೀಡಲಾಗುತ್ತಿದೆ. ಇದ್ದ 4 ಗಂಟೆಯಲ್ಲೂ ಪದೇ ಪದೇ ಲೈನ್ ಟ್ರಿಪ್ ಆಗುವ ಕಾರಣ ಬೆಳೆಗಳಿಗೆ ನೀರು ಹಾಯಿಸಲು ಸಮಸ್ಯೆಯಾಗುತ್ತಿದೆ. ಕೂಡಲೇ ಪ್ರತಿದಿನ ಹಗಲು 5 ಗಂಟೆ ಮತ್ತು ರಾತ್ರಿ 2 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ನೀಡುವಂತೆ ಆಗ್ರಹಿಸಿದ ರೈತರು ಈ ಕುರಿತು ಹೆಸ್ಕಾಂ ಎಇಇ ಎಸ್.ಪಿ ಅಲಕುಂಟೆ ಅವರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಪಾಂಡುರಂಗ ಮಿಟಗಾರ, ರಾಜು ರಪಾಟಿ, ಬಸವರಾಜ ಮುಗಳಿಹಾಳ, ಬಸಲಿಂಗಪ್ಪ ಬಿಜಾಪುರ, ಯಲ್ಲಾರಿ ನಿಲಜಕರ, ಮಾರುತಿ ಸತ್ತೆನ್ನವರ, ಸಂಜು ಪಾರಿಶ್ವಾಡ, ಶಿವರಾಜ ಬಿಜಾಪೂರ, ನಾಗನಗೌಡ ಪಾಟೀಲ, ಕಲ್ಲಪ್ಪ ಸಂಗೊಳ್ಳಿ ಮತ್ತಿತರರು ಇದ್ದರು.