RNI NO. KARKAN/2006/27779|Sunday, October 20, 2024
You are here: Home » breaking news » ಹಾರೂಗೇರಿ:ಮನಮೋಹನ್ ಸಿಂಗ ಮತ್ತು ಸಿದ್ದರಾಮಯ್ಯ ನವರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು : ಸಚಿವ ಸತೀಶ

ಹಾರೂಗೇರಿ:ಮನಮೋಹನ್ ಸಿಂಗ ಮತ್ತು ಸಿದ್ದರಾಮಯ್ಯ ನವರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು : ಸಚಿವ ಸತೀಶ 

ಮನಮೋಹನ್ ಸಿಂಗ ಮತ್ತು ಸಿದ್ದರಾಮಯ್ಯ ನವರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು : ಸಚಿವ ಸತೀಶ
ನಮ್ಮ ಬೆಳಗಾವಿ ಸುದ್ದಿ , ಹಾರೂಗೇರಿ ಏ 15 :
ಮಾಜಿ ಪ್ರಧಾನಿ ಮನಮೋಹನ್ ಸಿಂಗ ಮತ್ತು ಸಿದ್ದರಾಮಯ್ಯ ನವರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು

ಸೋಮವಾರದಂದು ಕುಡಚಿ ಮತಕ್ಷೇತ್ರದ ಹಾರುಗೇರಿ ಗ್ರಾಮದ ಸಿಪಿಹೆಡ್ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು

ಕೃಷಿಹೊಂಡ , ಕೆರೆತೂಂಬುವಿಕೆ , ನೀರಾವರಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸಿದ್ದರಾಮಯ್ಯ ಅವರ ನೇತೃತ್ವದ ಕೈ ಸರಕಾರ ಮತ್ತು ಈಗೀರುವ ಮೈತ್ರಿ ಸರಕಾರ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ರೈತರ ,ಬಡವರ ಪರ ಧ್ವನಿಯಾಗಿದೆ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಭೂತ ಮಟ್ಟದಲ್ಲಿ ತಲುಪಿಸುವ ಕಾರ್ಯ ಯುವ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು . ಮೋದಿ ಅವರು ಪ್ರಧಾನಿ ಯಾಗಿ ಬರೀ ಐದು ವರ್ಷ ಭಾಷಣಗಳನ್ನು ಮಾಡುವಲ್ಲಿ ಕಾಲ ಹರಣ ಮಾಡಿದ್ದಾರೆ ವಿನ್ಹ ಅಭಿವೃದ್ಧಿ ಕಡೆ ಗಮನವನ್ನು ಹರಿಸಿಲ್ಲ . ಬುಲೇಟ್ ಟ್ರೈನ್ , ಗಂಗಾನದಿ ಶುದ್ದಕರಣ ಸೇರಿದಂತೆ ಅನೇಕ ಕನಸುಗಳನ್ನು ಜನರಿಗೆ ತೋರಿಸಿ ಮೋಸ ಮಾಡಿದ್ದಾರೆ . ಹಿಂದು , ಮುಸ್ಲಿಂರ ಭಾವನೆಗಳಿಗೆ ಧಕ್ಕೆತಂದು ಬಿಜೆಪಿ ಆಡಳಿತವನ್ನು ನಡೆಸುತ್ತಿದೆ . ಬಿಜೆಪಿಯವರು ಒಂದು ಸುಳ್ಳನ್ನು ನೂರು ಸಾರಿ ಹೇಳುವ ಮುಖಾಂತರ ಸತ್ಯವನ್ನಾಗಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ ಇದಕ್ಕೆ ಜನ ಮರಳಾಗದೆ ಅಭಿವೃದ್ಧಿ ಪರ ಇರುವ ಪಕ್ಷಕ್ಕೆ ಮತ ನೀಡಿ ದೇಶದಲ್ಲಿ ರಾಹುಲ ಗಾಂಧಿ ಯವರ ಕೈ ಬಲ ಪಡಿಸಲು ಪ್ರಕಾಶ ಹುಕ್ಕೇರಿ ಅವರಿಗೆ ತಮ್ಮ ಮತ ನೀಡಿಬೇಕೆಂದು ಸಚಿವರು ಮನವಿ ಮಾಡಿದರು .

ಈ ಸಂದರ್ಭದಲ್ಲಿ ಮಾಜಿ ಶಾಸಕ ಶಾಮ ಘಾಟಕೆ, ಮುಖಂಡರಾದ ಈರಗೌಡ ಪಾಟೀಲ , ಮಹಾವೀರ ಮೋಹಿತೆ , ಸೇರಿದಂತೆ ಸ್ಥಳೀಯ ತಾ.ಪಂ ,ಗ್ರಾಂ.ಪಂ ಸದಸ್ಯರು ಉಪಸ್ಥಿತರಿದ್ದರು

Related posts: