ಗೋಕಾಕ:ಬಿಜೆಪಿ ನೇತ್ರತ್ವದ ಎನ್ಡಿಎ ಮೈತ್ರಿಕೂಟ ಬಹುಮತ : ಬಜರಂಗದಳದ ಕಾರ್ಯಕರ್ತರ ವಿಜಯೋತ್ಸವ
ಬಿಜೆಪಿ ನೇತ್ರತ್ವದ ಎನ್ಡಿಎ ಮೈತ್ರಿಕೂಟ ಬಹುಮತ : ಬಜರಂಗದಳದ ಕಾರ್ಯಕರ್ತರ ವಿಜಯೋತ್ಸವ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 23 :
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತ್ರತ್ವದ ಎನ್ಡಿಎ ಮೈತ್ರಿಕೂಟ ಬಹುಮತ ಪಡೆದಿಕ್ಕೆ ಇಲ್ಲಿಯ ಬಜರಂಗದಳದ ಕಾರ್ಯಕರ್ತರು ನಗರದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಬಜರಂಗದಳದ ಬೆಳಗಾವಿ ವಿಭಾಗೀಯ ಸಂಚಾಲಕ ಸದಾಶಿವ ಗುದಗಗೋಳ, ಜಿಲ್ಲಾ ಸಂಚಾಲಕ ಲಕ್ಷ್ಮಣ ಮಿಶಾಳೆ, ತಾಲೂಕಾ ಕಾರ್ಯದರ್ಶಿ ಕಿರಣ ಮಿರಜಕರ, ಪ್ರವೀಣ ಚುನಮರಿ, ಗುರು ಬೆನ್ನವಾಡ, ದಯಾನಂದ ಮಾವರಕರ, ಪ್ರವೀಣ ಚಕ್ಕಡಿ, ಬಿಜೆಪಿ ಮುಖಂಡರಾದ ವಾಸುದೇವ ಸವತಿಕಾಯಿ, ಲಕ್ಕಪ್ಪ ತಹಶೀಲದಾರ ಸೇರಿದಂತೆ ಅನೇಕರು ಇದ್ದರು.