ಗೋಕಾಕ:ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಗೆಲುವು : ಬೆಟಗೇರಿಯಲ್ಲಿ ವಿಜೇಯ್ಯೋತ್ಸವ
ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಗೆಲುವು : ಬೆಟಗೇರಿಯಲ್ಲಿ ವಿಜೇಯ್ಯೋತ್ಸವ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಮೇ 23 :
ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರು ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿದರ ಹಿನ್ನಲೆಯಲ್ಲಿ ಗುರುವಾರ ಮೇ.23 ರಂದು ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮದ ಬಾಲಚಂದ್ರ ಜಾರಕಿಹೊಳಿ ಅಭಿಮಾನಿ ಬಳಗದ ಸಂಚಾಲಕ, ಬಿಜೆಪಿ ಮುಖಂಡ ಈಶ್ವರ ಬಳಿಗಾರ ನೇತೃತ್ವದಲ್ಲಿ ಬಾಲಚಂದ್ರ ಜಾರಕಿಹೊಳಿ ಅಭಿಮಾನಿ ಬಳಗದ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಒಬ್ಬರಿಗೊಬ್ಬರೂ ಸಿಹಿ ವಿತರಿಸಿ, ಗುಲಾಲು ಎರಚಿಕೊಂಡು ವಿಜೇಯ್ಯೋತ್ಸವ ಆಚರಿಸಿದರು.
ಬಸನಗೌಡ ದೇಯಣ್ಣವರ, ಪುಂಡಲೀಕಪ್ಪ ಪಾರ್ವತೇರ, ಲಕ್ಷ್ಮಣ ನೀಲಣ್ಣವರ, ಗೌಡಪ್ಪ ದೇಯಣ್ಣವರ, ರಾಮಣ್ಣ ಕತ್ತಿ, ಮಲ್ಲಪ್ಪ ಕಂಬಿ, ಬಸವರಾಜ ಮುಧೊಳ, ಗೌಡಪ್ಪ ಮೇಳೆಣ್ಣವರ, ಹನುಮಂತ ಹಾಲಣ್ಣವರ, ನಾಗಪ್ಪ ಉದ್ದಣ್ಣವರ, ಮಲ್ಲಪ್ಪ ಪಣದಿ, ಮಲ್ಲಿಕಾರ್ಜುನ ಮೆಳೆಣ್ಣವರ, ಹಜರತ್ ಮಿರ್ಜಾನಾಯ್ಕ, ಮಾಯಪ್ಪ ಬಾಣಸಿ, ಸ್ಥಳೀಯ ಬಾಲಚಂದ್ರ ಜಾರಕಿಹೊಳಿ ಅಭಿಮಾನಿ ಬಳಗದ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಇತರರು ಇದ್ದರು.